ಬೆಂಗಳೂರು, ಫೆ.13(DaijiworldNews/TA):ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿ ಸ್ಫೋಟಕ ಬ್ಯಾಟ್ಸ್ಮನ್ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. 2021 ರಿಂದ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿರುವ ಪಾಟಿದಾರ್ 2025ರ ಐಪಿಎಲ್ ಆವೃತ್ತಿಗೆ ತಂಡವನ್ನು ಮುನ್ನಡೆಸಲಿದ್ದಾರೆ.

ರಜತ್ ಪಾಟಿದಾರ್ ಅವರಿಗೆ ನಾಯಕತ್ವದ ಅನುಭವವಿದೆ. ಅವರು ಸೈಯದ್ದು ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡದ ನಾಯಕರಾಗಿ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಪಾಟಿದಾರ್ 2022 ರಿಂದ 2024 ರವರೆಗೆ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಆರ್ಸಿಬಿ ತಂಡ ಆಡಿತ್ತು.
ಆದರೆ, ಮೆಗಾ ಹರಾಜಿಗಿಂತ ಮುಂಚೆ, ಡುಪ್ಲೆಸಿಸ್ ಅವರನ್ನು RCB ತಂಡದಿಂದ ಬಿಡುಗಡೆ ಮಾಡಲಾಯಿತು. ಹರಾಜಿನಲ್ಲಿ 40 ವರ್ಷದ ಡುಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ಹೊಸ ನೇತೃತ್ವದ ಮೂಲಕ, ಆರ್ಸಿಬಿ ತಂಡವು 2025 ಐಪಿಎಲ್ನಲ್ಲಿಯೂ ಹೊಸ ಗೆಲುವಿನ ದಿಕ್ಕಿನಲ್ಲಿ ಹೊರಡುವ ನಿರೀಕ್ಷೆ ಇದೆ.