ಬೆಂಗಳೂರು, ಫೆ 21 (DaijiworldNews/MS): ಉನ್ನತ ಸ್ಥಾನದಲ್ಲಿದ್ದು ಪರಸ್ಪರ ಕಿತ್ತಾಟ ನಡೆಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರನ್ನು ಸರ್ಕಾರ ಇದೀಗ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಮುಜರಾಯಿ ಇಲಾಖೆ ಆಯುಕ್ತರಾಗಿದ್ದ ಸಿಂಧೂರಿ ಹಾಗೂ ಕರಕುಶಲ ನಿಗಮದ ಎಂಡಿ ರೂಪಾ ಹಾಗೂ ರೂಪ ಪತಿ ಐಎಎಸ್ ಅಧಿಕಾರಿ ಮನೀಶ್ ಮುದ್ಗಲ್ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.
ರೂಪ ಹಾಗೂ ಸಿಂಧೂರಿಗೆ ಸ್ಥಳವನ್ನು ತೋರಿಸದೆ ವರ್ಗಾಯಿಸಿರುವುದು ಅವರಿಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಮುದ್ಗಲ್ ಅವರನ್ನು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ.