ಮುಂಬೈ, ಫೆ 19 (DaijiworldNews/DB): ಶಿವಸೇನೆಯ ಚಿಹ್ನೆ ವಿವಾದದ ವಿಚಾರದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಪುಣೆಯ ಬಾರಾಮತಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಏಕನಾಥ್ ಶಿಂಧೆ ಅವರ ಬಣಕ್ಕೆ ಚುನಾವಣಾ ಆಯೋಗವು ಶಿವಸೇನೆಯ ಮೂಲ ಚಿಹ್ನೆ ಹಾಗೂ ಹೆಸರನ್ನು ನೀಡಿದೆ. ಚುನಾವಣಾ ಆಯೋಗದ ಈ ನಿರ್ಧಾರದ ಬಗ್ಗೆ ನನ್ನ ನಿಲುವೇನೆಂಬುದನ್ನು ಈಗಾಗಲೇ ನಾನು ಹೇಳಿದ್ದೇನೆ. ಮುಂದೆ ಈ ವಿಚಾರವಾಗಿ ನಾನು ಯಾವುದೇ ಮಾತುಗಳನ್ನಾಡುವುದಿಲ್ಲ. ಆ ವಿವಾದದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ಆಯೋಗದ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಉದ್ದವ್ ಹೇಲಿದ್ದಾರೆ. ಅವರ ಬಣಕ್ಕೆ ಪಕ್ಷದ ಮೂಲ ಚಿಹ್ನೆ ಸಿಗದಿರುವುದರಿಂದ ವ್ಯತ್ಯಾಸವೇನೂ ಆಗುವದಿಲ್ಲ. ಅವರು ಬೇರೆ ಚಿಹ್ನೆಯನ್ನು ಸ್ವೀಕರಿಸುತ್ತಾರೆ ಎಂದರು.