ಬೆಂಗಳೂರು, ಫೆ. 17 (DaijiworldNews/SM): ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ನಿಯೋಜಿತ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರಿಗೆ ಬೆಂಗಳೂರಿನಲ್ಲಿ “ಅತ್ಯುತ್ತಮ ರಾಜ್ಯ ಪದಾಧಿಕಾರಿ ಪ್ರಶಸ್ತಿ” ಇತ್ತೀಚಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಎನ್ಎಸ್ಯುಐ ಕರ್ನಾಟಕ ರಾಜ್ಯ ಕಾರ್ಯಕಾರಿಣಿಯ ಸಭೆಯಲ್ಲಿ, ಕೆಲಸದಲ್ಲಿನ ಶ್ರೇಷ್ಠತೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿದರು.
ಸುಹಾನ್ ಆಳ್ವ ಅವರು ಆಯೋಜಿಸಿರುವ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ವರದಿಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ .ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು NSUI ಉಸ್ತುವಾರಿ ಇನಾಯತ್ ಅಲಿ , NSUI ಕರ್ನಾಟಕ ಅಧ್ಯಕ್ಷ ಕೀರ್ತಿ ಗಣೇಶ್ , NSUI ಕರ್ನಾಟಕ ಉಸ್ತುವಾರಿ ಎರಿಕ್ ಸ್ಟೀಫನ್ ಉಪಸ್ಥಿತರಿದ್ದರು .