ಬೆಂಗಳೂರು, ಫೆ 17 (DaijiworldNews/HR): ಬಜೆಟ್ನಲ್ಲಿ ರಾಮಮಂದಿರ ಘೋಷಣೆ ಮಾಡಿದ್ರೂ ಅದನ್ನ ನಾನೇ ಮಾಡಬೇಕು. ಅವರ ಕೈಯಲ್ಲಿ ಮಾಡೋಕಾಗಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ಬಜೆಟ್ನಲ್ಲಿ ರಾಮಮಂದಿರ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ರಾಮಮಂದಿರ ಘೋಷಣೆ ಮಾಡಿದ್ರೂ ಅದನ್ನ ನಾನೇ ಮಾಡಬೇಕು. ಅವರ ಕೈಯಲ್ಲಿ ಮಾಡೋಕಾಗಲ್ಲ. ಅವರು ಮೂರು ವರ್ಷದ ಹಿಂದೆ ಮಾಡಿ ಕಟ್ಟಿದ್ದಿದ್ರೆ ಒಪ್ಕೊತ್ತಿದ್ದೆ ಎಂದರು.
ಇನ್ನು ಇನ್ನೆರಡು ತಿಂಗಳಲ್ಲಿ ಚುನಾವಣೆ ಘೋಷಣೆ ಆಗಲಿದ್ದು, ಚುನಾವಣೆ ಘೋಷಣೆ ಆದ್ಮೇಲೆ ಇದು ಬುಕ್ಕಿನ ಒಳಗಡೆಯೇ ಇರುತ್ತದೆ. ರಾಮಮಂದಿರ ಇವರು ಕಟ್ಟೋಕೆ ಆಗಲ್ಲ. ಮುಂದೆ ನಮ್ಮ ಸರ್ಕಾರ ಬಂದು ನಾವೇ ರಾಮಮಂದಿರ ಕಟ್ಟಬೇಕು ಎಂದು ಹೇಳಿದ್ದಾರೆ.