ಬೆಂಗಳೂರು, ಫೆ 17 (DaijiworldNews/MS): ರಾಜ್ಯದ ಜನರ ಕಿವಿಗೆ ಹೂ ಇಡುವ ಬಜೆಟ್ ಇದಾಗಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಬಜೆಟ್ ಕುರಿತು, ಕಿವಿಗೆ ಹೂ ಇಟ್ಟುಕೊಂಡೇ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿದ್ದಾರೆ.
ಬಿಜೆಪಿ 2018ರಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 500 ಅಶ್ವಾಸನೆ ಪೈಕಿ 57 ಭರವಸೆಯನ್ನು ಮಾತ್ರ ಈಡೇರಿಸಿದ್ದಾರೆ. ಬಜೆಟ್ ಗಾತ್ರ 3 ಲಕ್ಷ 9 ಸಾವಿರ 189 ಕೋಟಿ ರೂ ಬಜೆಟ್ ಆಗಿದೆ. ಕಳೆದ ಬಜೆಟ್ನಲ್ಲಿ206 ಹೊಸ ಘೋಷಣೆ ಮಾಡಿದ್ದು ಅದನ್ನು ಈಡೇರಿಸಿಲ್ಲ ಎಂದು ಟೀಕಿಸಿದ್ದಾರೆ.
ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಎಂದು ಹೇಳಬಹುದು. ರಾಜ್ಯದ ಜನರ ಕಿವಿಗೆ ಹೂ ಇಡುವ ಬಜೆಟ್ ಇದಾಗಿದೆ. ಸರ್ವಜ್ಞನ ವಚನ ಹೇಳುವ ಮೂಲಕ ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.