ಹರ್ಯಾಣ, ಫೆ 17 (DaijiworldNews/HR): ಬೊಲೆರೊ ಎಸ್ಯುವಿ ಕಾರಿನಲ್ಲಿ ಸುಟ್ಟಸ್ಥಿತಿಯಲ್ಲಿ ಇಬ್ಬರು ಯುವಕರ ಶವಗಳು ಪತ್ತೆಯಾಗಿರುವ ಘಟನೆ ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ನಡೆದಿದೆ.
ರಾಜಸ್ಥಾನದ ಭರತ್ಪುರ ಜಿಲ್ಲೆಯ ಪಹಾರಿ ತಹಸಿಲ್ನ ಘಾಟ್ಮಿಕಾ ಗ್ರಾಮದ ನಿವಾಸಿಗಳಾದ ನಜೀರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಮೃತರು.
ಇಬ್ಬರೂ ಮುಸ್ಲಿಂ ಯುವಕರನ್ನು ಗೋವಿನ ಕಳ್ಳ ಸಾಗಾಣಿಕೆಯ ಕಾರಣಕ್ಕೆ ರಾಜಸ್ಥಾನದ ಭರತ್ಪುರ್ ಜಿಲ್ಲೆಯಿಂದ ಅಪಹರಿಸಿ ಹರ್ಯಾಣದಲ್ಲಿ ಕೊಲೆಮಾಡಲಾಗಿದೆ ಆರೋಪ ಕೇಳಿ ಬಂದಿದೆ.
ಇನ್ನು ಈ ಪ್ರಕರಣ ಸಂಬಂಧ 5 ಮಂದಿ ಗೋರಕ್ಷಕರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದ್ದು, ಫೆ.16ರಂದು ನಾಸಿರ್ ಮತ್ತು ಜುನೈದ್ ಅವರ ಮೃತದೇಹ ಮಹೇಂದ್ರಾ ಬೊಲೆರೋ ಕಾರಿನಲ್ಲಿ ಹೊತ್ತಿ ಉರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದ ಪೋಲಿಸರು ಈಗ 5 ಮಂದಿಯನ್ನು ಬಂಧಿಸಿದ್ದಾರೆ.