ಸಿಕಂದರಾಬಾದ್, ಜ 15 (DaijiworldNews/DB): ವಿಮಾನಕ್ಕಿಂತಲೂ ಉತ್ತಮವಾದ ವಿನ್ಯಾಸವನ್ನು ವಂದೇ ಭಾರತ್ ರೈಲುಗಳು ಹೊಂದಿವೆ. ಆದಾಮದಾಯಕ ಪ್ರಯಾಣದ ಅನುಭವ ಇದರಲ್ಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಿಕಂದರಾಬಾದ್-ವಿಶಾಖಪಟ್ಟಣಂ ಮಾರ್ಗದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ರೈಲ್ವೇಯಿಂದ ಲೋಕಾರ್ಪಣೆಗೊಳ್ಳುತ್ತಿರುವ ಎಂಟನೇ ರೈಲು ಇದಾಗಿದೆ. 52 ಸೆಕೆಂಡ್ಗಳಲ್ಲಿ 100 ಕಿಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯವನ್ನೂ ಈ ರೈಲು ಹೊಂದಿದೆ. ಜಗತ್ತಿನ ಇತರ ಎಲ್ಲಾ ರೈಲುಗಳು ಈ ವೇಗ ಪಡೆದುಕೊಳ್ಳಲು 54-60 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತದೆ ಎಂದರು.
ಆದಾಮದಾಯ ಪ್ರಯಾಣದ ಅನುಭವ ನೀಡುವ ಈ ರೈಲುಗಳ ವಿನ್ಯಾಸ ವಿಮಾನಗಳ ವಿನ್ಯಾಸಕ್ಕಿಂತಲೂ ಉತ್ತಮವಾಗಿದೆ. ರಾಜಕೀಯವನ್ನೂ ಮೀರಿದ ಅಭಿವೃದ್ದಿ ಮತ್ತು ರೈಲ್ವೇ ಕ್ಷೇತ್ರದ ಕೊಡುಗೆ ಭಾರತದಲ್ಲಾಗುತ್ತಿದೆ ಎಂದವರು ಇದೇ ವೇಳೆ ಅಭಿಪ್ರಾಯಪಟ್ಟರು.