ಪುಣೆ, ಜ 15 (DaijiworldNews/DB): ರಸ್ತೆಯಲ್ಲಿ ಉಗುಳಿದ ವ್ಯಕ್ತಿಯಿಂದಲೇ ಅದನ್ನು ಸ್ವಚ್ಚ ಮಾಡಿಸಿದ ವಿದ್ಯಾಮಾನ ಪುಣೆಯಲ್ಲಿ ನಡೆದಿದೆ. ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳುಮ, ಉಗುಳಿದ ವ್ಯಕ್ತಿಯಿಂದಲೇ ಅದನ್ನು ಸ್ವಚ್ಚ ಮಾಡಿಸಿದ್ದಾರೆ.
ಪರಿಷದ್ ಮತ್ತು ಸ್ವಚ್ಛ ಸರ್ವೇಕ್ಷಣಾ 2023ರ ಸಂದರ್ಭದಲ್ಲಿ ರಸ್ತೆ, ಸಾರ್ವಜನಿಕ ರಂಗಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದೆ. ಅದರಂತೆ ಮುಖ್ಯ ರಸ್ತೆಗಳು, ಫುಟ್ಪಾತ್ಗಳು ಮತ್ತು ವಿಭಜಕಗಳಲ್ಲಿ ಉಗುಳುವ ನಾಗರಿಕರಿಕರಿಗೆ ದ'ಪರಿಷದ್ ಮತ್ತು ಸ್ವಚ್ಛ ಸರ್ವೇಕ್ಷಣಾ 2023 ರ ಸಂದರ್ಭದಲ್ಲಿ ಮುಖ್ಯ ರಸ್ತೆಗಳು, ಫುಟ್ಪಾತ್ಗಳು ಮತ್ತು ವಿಭಜಕಗಳಲ್ಲಿ ಉಗುಳುವ ನಾಗರಿಕರ ವಿರುದ್ಧ ದಂಡದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದಂಡ ವಿಧಿಸಲಾಗುತ್ತಿದೆ. ಇದೀಗ ದಂಡಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು, ರಸ್ತೆಯಲ್ಲಿ ಉಗುಳಿದ ವ್ಯಕ್ತಿಯಿಂದಲೇ ಸ್ವಚ್ಚ ಮಾಡಿಸಿದ್ದಾರೆ.
ಈ ವ್ಯಕ್ತಿಯು ಪುಣೆ ವಿಶ್ವ ವಿದ್ಯಾನಿಲಯ ರಸ್ತೆಯಲ್ಲಿ ಉಗುಳಿದ್ದ. ಉಗುಳಿದ್ದನ್ನು ಆತನಿಂದಲೇ ಸ್ವಚ್ಚ ಮಾಡಿಸುವ ವೀಡಿಯೋವನ್ನು ಅಧಿಕಾರಿಗಳು ಮುನ್ಸಿಪಲ್ ಕಾರ್ಪೋರೇಶನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.
ಜನವರಿ16 ಮತ್ತು 17ರಂದು ಪುಣೆ ನಗರದಲ್ಲಿ ಜಿ-20 ಸಮ್ಮೇಳನ ನಡೆಯಲಿದ್ದು, ಸುಮಾರು 35 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಸ್ವಚ್ಚತೆಗೆ ಮುನ್ಸಿಪಲ್ ಕಾರ್ಪೋರೇಶನ್ ಹೆಚ್ಚಿನ ಆದ್ಯತೆ ನೀಡುತ್ತಿದೆ.