ಕೇರಳ,ಜ.14(DaijiworldNews/SM): ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಭಕ್ತ ಸಾಗರಕ್ಕೆ ಮಣಿಕಂಠ ಸ್ವಾಮಿ ಮಕರಜ್ಯೋತಿ ಮೂಡುವ ಮೂಲಕ ದರ್ಶನ ನೀಡಿದ್ದಾನೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿವಿಧ ಭಾಗಸಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿತ್ತು.
ಮಕರಜ್ಯೋತಿ ದರ್ಶನದ ಮೂಲಕ ಅಯ್ಯಪ್ಪ ಸ್ವಾಮಿ ಭಕ್ತರು ಅಯ್ಯಪ್ಪನ ದರ್ಶನವನ್ನು ಕಣ್ತುಂಬಿಕೊಂಡರು. ಇದು ಭಕ್ತಕೋಟಿಗೆ ಒಂದು ಪುಣ್ಯ ಕಾಲವಾಗಿ ಮಾರ್ಪಟ್ಟಿತು. ಮಾಲಾಧಾರಿಗಳಿಗೆ ದೇವರೇ ಒಂದು ಬಾರಿ ದರ್ಶನ ನೀಡಿದ ಅನುಭವವಾಯಿತು.
ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮಕರಜ್ಯೋತಿ ಮೂಡುತ್ತದೆ. ಮೂಡುವುದು ಮೂಡುವುದು ಮಕರಜ್ಯೋತಿ ಎನ್ನುವ ಹಾಡಿನ ಮೂಲಕ ಭಕ್ತರು ಜ್ಯೋತಿಯನ್ನು ಕಣ್ತುಂಬಿಕೊಳ್ಳತ್ತಾರೆ. ಸ್ವಾಮಿಯೇ ಅಯ್ಯಪ್ಪ ಎನ್ನುವ ಮಂತ್ರ ಘೋಷಣೆ ಮೂಲಕ ಈ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ.