ಮುಂಬಯಿ, ಜ 14 (DaijiworldNews/DB): ಶಿವಸೇನೆಯಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಯುವಕರು ಪಕ್ಷದಲ್ಲಿ ಸಕ್ರಿಯವಾಗುತ್ತಿದ್ದಂತೆ ಬಲವಾದ ಶಿವಸೇನೆ ತಯಾರಾಗುತ್ತಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ವರ್ಲಿಯಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ಆಕ್ರಮಣಕಾರಿ ಮಣ್ಣಿನ ಮಕ್ಕಳ ರಾಜಕಾರಣಕ್ಕೆ ಪಕ್ಷ ಒಂದು ಕಾಲಕ್ಕೆ ಪ್ರಸಿದ್ದಿಯಾಗಿತ್ತು. ಆದರೆ ಈಗ ಪಕ್ಷದಲ್ಲಿ ಯುವಕರ ಸಕ್ರಿಯತೆ ಹೆಚ್ಚಿದೆ. ಇದರಿಂದ ಹೊಸ ಮತ್ತು ಬಲವಾದ ಶಿವಸೇನೆ ರೂಪುಗೊಳ್ಳುತ್ತಿದೆ ಎಂದರು.
ಅಮೂಲಾಗ್ರ ಬದಲಾವಣೆಯನ್ನು ಪಕ್ಷದಲ್ಲಿ ಕಾಣುತ್ತಿದ್ದೇವೆ. ಮಣ್ಣಿನ ಮಕ್ಕಳ, ಯುವಕರ ಸಮಸ್ಯೆ ಪರಿಹರಿಸಲು ಶಿವಸೇನೆ ಬದ್ದವಾಗಿದೆ. ಯುವಕರಿಗೆ ಉದ್ಯೋಗ ಮೇಳಗಳನ್ನು ಆಯೋಜಿಸಿ ಅವರ ಜೀವನಕ್ಕೆ ಆಧಾರವಾಗುವ ಕೆಲಸ ಮಾಡಲಾಗುತ್ತಿದೆ ಎಂದರು.