ನವದೆಹಲಿ, ಜ 14 (DaijiworldNews/DB): ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಚೇರಿ ಮೇಲೆ ಮತ್ತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಕುರಿತು ಸ್ವತಃ ಮನೀಶ್ ಸಿಸೋಡಿಯಾ ಅವರೇ ಟ್ವೀಟ್ ಮಾಡಿ ಶನಿವಾರ ಮಾಹಿತಿ ನೀಡಿದ್ದು, ಸಿಬಿಐ ಇಂದು ಮತ್ತೆ ನನ್ನ ಕಚೇರಿಗೆ ದಾಳಿ ಮಾಡಿದರು. ನನ್ನ ಮನೆ, ಕಚೇರಿ ಎರಡರ ಮೇಲೂ ದಾಳಿ ಮಾಡಿ ಲಾಕರ್ ಶೋಧಿಸಿದ್ದಾರೆ. ಅಲ್ಲದೆ ನನ್ನ ಹಳ್ಳಿಯನ್ನು ಕೂಡಾ ಪರಿಶೀಲನೆ ಮಾಡಿದ್ದಾರೆ. ದೆಹಲಿಯ ಮಕ್ಕಳ ಶಿಕ್ಷಣಕ್ಕಾಗಿ ನಾನು ಮಾಡಿದ ಕೆಲಸ ಪ್ರಾಮಾಣಿಕವಾಗಿದೆ ಎಂದಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ಸಿಸೋಡಿಯಾ ಮನೆ, ಕಚೇರಿ ಮೇಳೆ ದಾಳಿ ನಡೆಸಿತ್ತು. ಸದ್ಯ ಈ ಪ್ರಕರಣ ತನಿಖಾ ಹಂತದಲ್ಲಿದೆ.