ಬೆಂಗಳೂರು, ಜ 13 ( DaijiworldNews/MS): ಪಂಚಮಸಾಲಿ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿ ಆರಂಭದಲ್ಲಿ ಎಲ್ಲ ಕಾರ್ಯಗಳಿಗೆ ವಿಘ್ನ ಇದ್ದೇ ಇರುತ್ತದೆ. ಇದನ್ನೇ ಬಾಲ ಗ್ರಹ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.
ನ್ಯಾಯಾಲಯಕ್ಕೆ 2 ಎ ಮೀಸಲಾತಿ ವಿಚಾರ ವಾಗಿ ಮನವರಿಕೆ ಮಾಡುವುದು ಸರ್ಕಾರದ ಜವಾಬ್ದಾರಿ ಹೀಗಾಗಿ ನಾವು ಅದನ್ನು ಮಾಡುತ್ತೇವೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗದೆ, ಯಾವುದೇ ಜಾತಿಗಳಿಗೆ ಅನ್ಯಾಯ ಆಗದೆ ಮೀಸಲಾತಿ ತರುತ್ತೇವೆ ಎಂದು ಹೇಳಿದ್ದಾರೆ.
ಹಸಿದವರಿಗೆ ಊಟ ಬೇಕು, ಆದರೆ ಊಟ ಹೇಗೆ ಕೊಡಬೇಕು ಎಂದು ಹಸಿದವರು ಕೇಳಲ್ಲ.ಅದೇ ರೀತಿ ಮೀಸಲಾತಿ ಕೂಡಾಸಣ್ಣ ಪುಟ್ಟ ಜಾತಿಗಳಿಗೂ ಅನ್ಯಾಯ ಆಗದಂತೆ, ಎಸ್ ಸಿ ಎಸ್ ಟಿ ಮೀಸಲಾತಿಗೆ ಧಕ್ಕೆ ಆಗದಂತೆ ಮೀಸಲಾತಿ ನೀಡಲಾಗುವುದು. ಪಂಚಮಸಾಲಿ, ಒಕ್ಕಲಿಗ, ಕುರುಬ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಯನ್ನು ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ.