ನವದೆಹಲಿ, ಜ 11 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಶಿವಸೇನೆ ಬೆಂಬಲ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಶಿವಸೇನೆ ನಾಯಕ (ಉದ್ದವ್ ಬಣ) ಮನೀಷ್ ಸಹ್ನಿ, ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಶಿವಸೇನೆ ಬೆಂಬಲ ನೀಡಲಿದೆ. ಜಮ್ಮು-ಕಾಶ್ಮೀರದಲ್ಲಿ ಮುಂದಿನ ವಾರ ನಡೆಯಲಿರುವ ಯಾತ್ರೆಯಲ್ಲಿ ಅಲ್ಲಿನ ಸ್ಥಳೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಧರ್ಮ ಮತ್ತು ದ್ವೇಷವನ್ನೇ ಬಂಡವಾಳವನ್ನಾಗಿಸಿ ರಾಜಕೀಯ ಮಾಡುವವರಿಗೆ ತಕ್ಕ ಉತ್ತರ ನೀಡುವುದು ಇಂದಿನ ಅವಶ್ಯಕತೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮೂಲಕ ಅಂತಹವರಿಗೆ ಉತ್ತರ ಸಿಗಲಿದೆ ಎಂದರು.
ಈ ಯಾತ್ರೆಯು ಭ್ರಾತೃತ್ವ ಸಂದೇಶ ಹೊತ್ತು ಸಾಗುತ್ತಿದೆ. ಈ ಸಂದರ್ಭದಲ್ಲಿ ಇಂತಹ ಕಾರ್ಯಗಳು ತುರ್ತು ಆಗಬೇಕಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ತೀರಾ ಅವಶ್ಯವುಳ್ಳ ಯಾತ್ರೆ ಇದಾಗಿದೆ ಎಂದು ಬಣ್ಣಿಸಿದರು.