ನವದೆಹಲಿ, ಜ 11 (DaijiworldNews/HR): ಸ್ವಯಂಸೇವಕ ಸರ್ಕಾರ 8 ವರ್ಷಗಳಿಂದ ನಿದ್ದೆ ಮಾಡುತ್ತಿದಿಯಾ? RSS ನ ಸಿದ್ಧಾಂತವು ಭಾರತದ ಭವಿಷ್ಯಕ್ಕೆ ಅಪಾಯವಾಗಿದೆ ಎಂದು ಅಸಾದುದ್ದೀನ್ ಓವೈಸಿ ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಸ್ಲಿಮರಿಗೆ ಭಾರತದಲ್ಲಿ ವಾಸಿಸಲು ಅಥವಾ ನಮ್ಮ ನಂಬಿಕೆಯನ್ನು ಅನುಸರಿಸಲು ಅನುಮತಿ ನೀಡಲು ಮೋಹನ್ ಯಾರು? ಅಲ್ಲಾ ಬಯಸಿದ್ದರಿಂದ ನಾವು ಭಾರತೀಯರು. ನಮ್ಮ ಪೌರತ್ವಕ್ಕೆ ಷರತ್ತುಗಳನ್ನು ಹಾಕಲು ಅವರಿಗೆ ಎಷ್ಟು ಧೈರ್ಯ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನಮ್ಮ ನಂಬಿಕೆಯನ್ನು ಸರಿಹೊಂದಿಸಲು ಅಥವಾ ನಾಗ್ಪುರದಲ್ಲಿ ಆಪಾದಿತ ಬ್ರಹ್ಮಚಾರಿಗಳ ಗುಂಪನ್ನು ಮೆಚ್ಚಿಸಲು ನಾವು ಇಲ್ಲಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://