ನವದೆಹಲಿ, ಜ 11 (DaijiworldNews/DB): ಕೊಯಮತ್ತೂರಿನಲ್ಲಿ ನಡೆದ ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದ್ದು, ಸ್ಪೋಟದಲ್ಲಿ ಮೃತಪಟ್ಟ ಆರೋಪಿಯ ಮನೆಗೆ ಬಂಧಿತರನ್ನು ಕರೆದೊಯ್ದು ತನಿಖೆ ನಡೆಸಲಾಗುತ್ತಿದೆ.
ಕಳೆದ ವರ್ಷಕೊಯಮತ್ತೂರಿನಲ್ಲಿ ಸಿಲಿಂಡರ್ ಸ್ಪೋಟದಲ್ಲಿ ಆರೋಪಿ ಮುಬಿನ್ ಮೃತಪಟ್ಟಿದ್ದ. ಮೊದಲಿಗೆ ಇದೊಂದು ಸಿಲಿಂಡರ್ ಸ್ಪೋಟ ಎಂದು ಕಂಡು ಬಂದಿದ್ದರೂ, ಬಳಿಕ ಭಯೋತ್ಪಾದಕ ಕೃತ್ಯ ಎಂಬುದು ಗೊತ್ತಾಗಿತ್ತು. ಇದೀಗ ಸ್ಪೋಟ ಪ್ರಕರಣ ಸಂಬಂಧಿಸಿ ನಾಲ್ವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದು, ಅವರೆಲ್ಲರನ್ನೂ ಪ್ರಮುಖ ಆರೋಪಿ, ಮೃತ ಮುಬಿನ್ ಮನೆಗೆ ಕರೆದೊಯ್ದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮೃತ ಮುಬಿನ್ ಮನೆಯಲ್ಲಿ ನಾಡ ಬಾಂಬ್ ತಯಾರಿಕೆಗೆ ಬಳಸುವ ಪೊಟ್ಯಾಷಿಯಮ್ ನೈಟ್ರೇಟ್, ಅಲ್ಯೂಮಿನಿಯಂ ಪುಡಿ, ಇದ್ದಿಲು, ಸಲ್ಪರ್ ಸೇರಿದಂತೆ ಹಲವು ಕಚ್ಚಾವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.