ಅಗರ್ತಲಾ, ಜ 08 (DaijiworldNews/DB): ಬಿಜೆಪಿಯು ಗಂಗಾ ನದಿ ಇದ್ದಂತೆ. ಇದರಲ್ಲಿ ಮುಳುಗಿ ಏಳುವುದರಿಂದ ನಿಮ್ಮೆಲ್ಲಾ ಪಾಪ ನಾಶವಾಗುತ್ತದೆ ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಹೇಳಿದ್ದಾರೆ.
ದಕ್ಷಿಣ ತ್ರಿಪುರಾದ ಕಾಕ್ರಬನ್ನಲ್ಲಿ ಜನ್ ವಿಶ್ವಾಸ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಬಿಜೆಪಿ ಸೇರ್ಪಡೆಗೆ ಎಡಪಕ್ಷಗಳ ನಾಯಕರನ್ನೂ ಆಹ್ವಾನಿಸುತ್ತೇನೆ. ಏಕೆಂದರೆ ಬಿಜೆಪಿ ಗಂಗಾ ನದಿ ಇದ್ದಂತೆ. ಇದರಲ್ಲಿ ಮುಳುಗಿ ಎದ್ದರೆ ಖಂಡಿತಾ ನಿಮ್ಮ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದರು.
ಸ್ಟಾಲಿನ್ ಮತ್ತು ಲೆನಿನ್ ಸಿದ್ದಾಂತದಲ್ಲಿ ನಂಬಿಕೆ ಹೊಂದಿದವರಿಗೆ ನಾನು ಈಗಲೂ ಹೇಳುತ್ತೇನೆ. ಬಿಜೆಪಿ ಸೇರಿ ನಿಮ್ಮ ಪಾಪವನ್ನು ನಾಶ ಮಾಡಿಕೊಳ್ಳಿ. ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದರೆ ಪಾಪ ನಾಶ ಹೇಗಾಗುತ್ತದೆಯೋ ಹಾಗೆಯೇ ಬಿಜೆಪಿಯಲ್ಲಿ ಸೇರಿದರೂ ಆಗುತ್ತದೆ ಎಂದು ಅವರು ಎಡಪಕ್ಷಗಳ ನಾಯಕರನ್ನು ಬಿಜೆಪಿಗೆ ಆಹ್ವಾನಿಸಿದರು.
ಇನ್ನು ಮಾಣಿಕ್ ಸಾಹಾ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.