ಬೆಂಗಳೂರು, ಜ 08 ( DaijiworldNews/MS): ಸಂಕ್ರಾಂತಿಗೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಸ್ಯಾಂಟ್ರೋ ರವಿ ಜತೆ ಲಿಂಕ್ ಇರುವ ನಾಯಕರ ರಹಸ್ಯ ಸಿಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಳಿಯಿದ್ದು, ಸಂಕ್ರಾಂತಿಗೆ ರಿಲೀಸ್ ಆಗಬಹುದೆಂದು ವರದಿಯಾಗಿದೆ.
ಈ ನಡುವೆ ಹೆಚ್.ಡಿ ಕುಮಾರಸ್ವಾಮಿ, 'ಸ್ಯಾಂಟ್ರೋ ರವಿ ಯಾರವ? ಸಿಎಂ ಅವನನ್ನ ಸಾರ್ ಎನ್ನುತ್ತಾರೆ. ನನ್ನ ಕೆಣಕಿದರೆ ಇವನ ಜತೆ ಇರುವ ವ್ಯಕ್ತಿಗಳ ಹೊರಬಿಡುವ ಬಹಳ ವಿಷಯ ನನ್ನಲ್ಲಿವೆ. ಹುಷಾರ್..' ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಂಕ್ರಾಂತಿ ವೇಳೆಗೆ ಮೂವರು ಸಚಿವರ ರಹಸ್ಯ ಸಿಡಿ ಹೊರಬರುವ ವದಂತಿ ಬಗ್ಗೆ ಡಿಕೆ ಶಿವಕುಮರ್ ಪ್ರತಿಕ್ರಿಯಿಸಿದ್ದು, ಅವರು ಮುತ್ತು-ರತ್ನಗಳನ್ನೆಲ್ಲ ಇಟ್ಟುಕೊಂಡಿರಬೇಕು. ನಾನು ಈ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಈ ಸರ್ಕಾರ ಎಷ್ಟೊಂದು ಭ್ರಷ್ಟ ಆಗಿದೆ ಎಂಬುದು ಜನರಿಗೆ ಗೊತ್ತಾಗಿದೆ. ನಾವು ಜನರ ಬದುಕಿನ ಬಗ್ಗೆ ಚಿಂತಿಸುತ್ತಿದ್ದೇವೆಯೇ ಹೊರತು ಬೇರೆ ವಿಚಾರಗಳು ನಮಗೆ ಬೇಡ ಎಂದು ಹೇಳಿದ್ದಾರೆ.