ನವದೆಹಲಿ, ಜ 06 (DaijiworldNews/HR): ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಬಾಯ್ಕಾಟ್ ಬಾಲಿವುಡ್ ತಡೆಯಲು ಸಹಾಯ ಮಾಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ.
ದಯವಿಟ್ಟು ಬಾಯ್ಕಾಟ್ ಬಾಲಿವುಡ್ ನಿಲ್ಲಿಸಿ. ನೀವು ಅದನ್ನು ನಿಲ್ಲಿಸಬಹುದು. ಟ್ವಿಟರ್ನಲ್ಲಿನ ಟ್ರೆಂಡ್ಗಳನ್ನು ನಿಲ್ಲಿಸಬಹುದು.ನಮ್ಮ ಸಂಗೀತ ಮತ್ತು ಕಲೆ ಮೂಲಕ ಭಾರತವನ್ನು ಜಗತ್ತಿನಲ್ಲಿ ಹೆಮ್ಮೆ ಪಡುವಂತೆ ಮಾಡಿದೆವು. ನೀವು ಪ್ರಧಾನಿಯವರೊಂದಿಗೆ ಮಾತನಾಡಿದರೆ ಅದು ಸಹಾಯಕವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
#ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಹೆಚ್ಚುತ್ತಿರುವ ಮಧ್ಯೆ ಟ್ವಿಟರ್ ಬಳಕೆದಾರರು ಬಾಲಿವುಡ್ ಚಲನಚಿತ್ರಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿರುವ ನಡುವೆ ನಟರಿಂದ ಈ ವಿನಂತಿಯು ಬಂದಿದೆ.