ನವದೆಹಲಿ, ಜ 06 (DaijiworldNews/HR): ದೆಹಲಿ ಮೇಯರ್ ಚುನಾವಣೆಗೆ ಮುನ್ನ ಸಿವಿಕ್ ಸೆಂಟರ್ನಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ಗಳು ಪರಸ್ಪರ ಘರ್ಷಣೆ ನಡೆದು ಘೋಷಣೆಗಳನ್ನು ಕೂಗಿ ಕೋಲಾಹಲವೆಬ್ಬಿಸಿದ ಘಟನೆ ಶುಕ್ರವಾರ ನಡೆದಿದೆ.
img src=https://daijiworld.ap-south-1.linodeobjects.com/Linode/img_tv247/hr-0601223-fight.jpg>
ನಗರ ನಾಗರಿಕ ಸಂಸ್ಥೆಯ ಮೇಯರ್ ಚುನಾವಣೆ ಇಂದು ನಡೆಯುತ್ತಿದ್ದು, ದೆಹಲಿ ಕಾಂಗ್ರೆಸ್ ಭಾಗವಹಿಸುತ್ತಿಲ್ಲ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ನ ಮೇಯರ್, ಉಪ ಮೇಯರ್ ಮತ್ತು ಸದನದ ನಾಯಕರ ಹುದ್ದೆಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಥವಾ ಬಿಜೆಪಿಯನ್ನು ಬೆಂಬಲಿಸದಿರಲು ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ಹೇಳಿದ್ದಾರೆ.
ಇನ್ನು ಚುನಾಯಿತ ಎಎಪಿ ಕೌನ್ಸಿಲರ್ಗಳನ್ನು ಮುಗಿಸಲು ಬಿಜೆಪಿ ಬಯಸುತ್ತಿದೆ ಮತ್ತು ಮನೆಯಲ್ಲಿ ರಕ್ತದ ಆಟ ಆಡುತ್ತಿದೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
250 ಸದಸ್ಯರ ಎಂಸಿಡಿಯಲ್ಲಿ ಬಹುಮತಕ್ಕೆ 126 ಬಲ ಅಗತ್ಯವಾಗಿದ್ದು, ಎಎಪಿ 134 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 104 ವಾರ್ಡ್ಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 9 ಸ್ಥಾನಗಳಿಗೆ ಸೀಮಿತವಾಗಿದೆ. ಎಎಪಿ ಸ್ಪಷ್ಟವಾಗಿ ಮೇಲುಗೈ ಹೊಂದಿದೆ ಆದರೆ ಬಿಜೆಪಿ ಅಡ್ಡ ಮತದಾನವಾಗುವ ನಿರೀಕ್ಷೆ ಇರಿಸಿಕೊಂಡಿದೆ ಎಂದು ಹೇಳಲಾಗಿದೆ.