ಕೋಲ್ಕತ್ತಾ, ಜ 05 (DaijiworldNews/DB): ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಕಲ್ಲೆಸೆದಿರುವುದು ನೆರೆಯ ಬಿಹಾರದಲ್ಲಿಯೇ ಹೊರತು ನಮ್ಮ ರಾಜ್ಯದಲ್ಲಿ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಲ್ಲೆಸೆತ ನಡೆದಿರುವುದು ಪಶ್ಚಿಮ ಬಂಗಾಳದಲ್ಲಿ ಎಂಬ ಸುದ್ದಿ ಹರಡಿಸಿ ಮಾಧ್ಯಮಗಳು ರಾಜ್ಯಕ್ಕೆ ಕೆಟ್ಟ ಹೆಸರು ತಂದಿವೆ. ಅಂತಹ ಮಾಧ್ಯಮಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊಸ ಎಂಜಿನ್ ನೊಂದಿಗೆ ಹಳೆಯ ರೈಲನ್ನು ನವೀಕರಿಸಿರುವುದಕ್ಕೆ ವಂದೇ ಭಾರತ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಹೊಸತೇನೂ ಇಲ್ಲ ಎಂದು ಇದೇ ವೇಳೆ ಅವರು ಲೇವಡಿ ಮಾಡಿದರು.
ಪ್ರಧಾನಿ ಮೋದಿ ಅವರು ವಂದೇ ಭಾರತ್ ಎಕ್ಸ್ ಪ್ರೆಸ್ ನ್ನು ಉದ್ಘಾಟಿಸಿದ ಎರಡೇ ದಿನದಲ್ಲಿ ರೈಲಿಗೆ ಕಲ್ಲೆಸೆದು ಹಾನಿಗೊಳಿಸಲಾಗಿತ್ತು. ಈ ಘಟಮೆ ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು. ಕಲ್ಲೆಸೆದ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.