ನವದೆಹಲಿ, ಜ 05 (DaijiworldNews/HR): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಸರಿ ಉಡುಗೆ ತೊಡುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ಹುಸೇನ್ ದಲ್ವಾರ್ ಹೇಳಿದ್ದು, ಇದನ್ನು ಬಿಜೆಪಿಯ ತೀವ್ರವಾಗಿ ಖಂಡಿಸಿದೆ.
ದಲ್ವಾರ್ ವಿರುದ್ದ ಬಿಜೆಪಿಯ ರಾಮ್ ಕದಂ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷವು 'ಹಿಂದೂ ಧರ್ಮದ ಪವಿತ್ರ ಬಣ್ಣ' ಎಂದು ಹೇಳುವ ಕೇಸರಿ ಬಣ್ಣದ ಬಗ್ಗೆ ಏಕೆ ಇಷ್ಟೊಂದು ದ್ವೇಷವನ್ನು ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇನ್ನು 'ಹಿಂದೂ ಧರ್ಮದ ಪವಿತ್ರ ಬಣ್ಣವಾದ ಕೇಸರಿ ಮೇಲೆ ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷಕ್ಕೆ ಏಕೆ ದ್ವೇಷವಿದೆ? ಕೇಸರಿ ನಮ್ಮ ಧ್ವಜದ ಬಣ್ಣ ಮತ್ತು ನಮ್ಮ ಋಷಿಗಳು ಮತ್ತು ಸಂತರ ಉಡುಗೆ ಮಾತ್ರವಲ್ಲ, ಅದು ತ್ಯಾಗ, ಸೇವೆಯ ಸಂಕೇತವಾಗಿದೆ. ಜ್ಞಾನ, ಶುದ್ಧತೆ ಮತ್ತು ಆಧ್ಯಾತ್ಮಿಕತ, 'ಎಂದು ಬಿಜೆಪಿ ನಾಯಕ ಕಾಂಗ್ರೆಸ್ ನಾಯಕನ ವೀಡಿಯೊವನ್ನು ಹಂಚಿಕೊಂಡಿದ್ದಾರೆ.