ನವದೆಹಲಿ, ಜ 04 ( DaijiworldNews/MS): ಕೇಂದ್ರ ಸರ್ಕಾರ ಈ ಬಾರಿ ಬಜೆಟ್ನಲ್ಲಿ ಜನಸಾಮಾನ್ಯರು-ರೈತರಿಗೆ ದೊಡ್ಡ ಶಾಕ್ ನೀಡಲಿದ್ದು, ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ಮೇಲಿನ ವೆಚ್ಚ 3.7 ಲಕ್ಷ ಕೋಟಿಗೆ ಇಳಿಸುವ ಸಾಧ್ಯತೆ ಇದೆ.
ಅಂದರೆ ಈ ವರ್ಷದಿಂದ ಆಹಾರ-ರಸಗೊಬ್ಬರ ಸಬ್ಸಿಡಿ ಪ್ರಮಾಣ ಶೇ.26ರಷ್ಟು ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಕೊರೊನಾ ಕಾಲದ ಹಣಕಾಸು ಕೊರತೆ ನೀಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಹಣಕಾಸು ವರ್ಷದಲ್ಲಿ ಸಬ್ಸಿಡಿ ಒಟ್ಟು ಬಜೆಟ್ ವೆಚ್ಚದ (39.45 ಲಕ್ಷ ಕೋಟಿ) 8ನೇ ಒಂದು ಭಾಗದಷ್ಟಿತ್ತು. ಆದರೆ ಇದೀಗ ಮತ್ತಷ್ಟು ಕಡಿತ ಮಾಡುವ ಸಾಧ್ಯತೆ ಇದೆ.
ಆಹಾರದ ಮೇಲಿನ ಸಬ್ಸಿಡಿ ಕಡಿತವು ಚುನಾವಣೆ ದೃಷ್ಟಿಯಿಂದ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರ ಈ ಬಗ್ಗೆ ಹೇಗೆ ಕ್ರಮ ಕೈಗೊಳ್ಳಲಿದೆ ಎನ್ನುವುದೇ ಕುತೂಹಲವಾಗಿದೆ.
್ಇನ್ನೊಂದೆಡೆ ಸಬ್ಸಿಡಿ ಕಡಿತದ ಕುರಿತು ಹಣಕಾಸು ಸಚಿವಾಲಯವು ಪ್ರತಿಕ್ರಿಯಿಸಲು ನಿರಾಕರಿಸಿದೆ.