ನವದೆಹಲಿ, ಜ 04 ( DaijiworldNews/MS): "ಮುಂದಿನ ಆರ್ಥಿಕ ಬಿಕ್ಕಟ್ಟು ಖಾಸಗಿ ಕ್ರಿಪ್ಟೋಕರೆನ್ಸಿಗಳಿಂದ ಸಂಭವಿಸಲಿದೆ ಬೇಕಾದರರೆ ಈ ಮಾತನ್ನು ನೋಟ್ ಮಾಡಿ ಇಟ್ಟುಕೊಳ್ಳಿ" ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಭವಿಷ್ಯ ನುಡಿದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗವರ್ನರ್ ದಾಸ್ ಅವರು, " ಕ್ರಿಪ್ಟೋಕರೆನ್ಸಿಗಳು ನಿಷೇಧಿಸಬೇಕು, ಇಲ್ಲವಾದರೆ ಆರ್ಥಿಕ ಸ್ಥಿರತೆಗೆ ಅಪಾಯ ಉಂಟು ಮಾಡುತ್ತವೆ. ಕ್ರಿಪ್ಟೋಕರೆನ್ಸಿಗಳು ಯಾವುದೇ "ಅಂಡರ್ಲೈನ್" ಮೌಲ್ಯ ಹೊಂದಿಲ್ಲ . ಇದು ಬ್ಯಾಂಕಿನ ಕರೆನ್ಸಿಯಲ್ಲಿ ನಂಬಿಕೆ ಅಥವಾ ಆರ್ಥಿಕ ಪ್ರಪಂಚವನ್ನು ನಿಯಂತ್ರಿಸದ ಕಾರಣ ವ್ಯವಸ್ಥೆಯನ್ನು ಮೀರಿಕೊಂಡು "ವ್ಯವಸ್ಥೆಯನ್ನು ಮುರಿಯಲು" ಜನ್ಮತಾಳಿರುವಂಥದ್ದು ಎಂದು ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿಯು ನಮ್ಮ ಸ್ಥೂಲ ಆರ್ಥಿಕ ಮತ್ತು ಆರ್ಥಿಕ ಸ್ಥಿರತೆಗೆ ಕೆಲವು ದೊಡ್ಡ ಅಂತರ್ಗತ ಅಪಾಯಗಳನ್ನು ಹೊಂದಿದೆ. ಆರ್ಥಿಕ ಪ್ರಪಂಚವನ್ನು ನಿಯಂತ್ರಿಸದ ಕಾರಣ ಅದು ವ್ಯವಸ್ಥೆಯನ್ನು ಬೈಪಾಸ್ ಮಾಡಲು ಮತ್ತು ಹಿಮ್ಮೆಟ್ಟಿಸಲು ಬಯಸುತ್ತದೆ" ಎಂದಿದ್ದಾರೆ.