ಜೈಪುರ, ಜ 04 (DaijiworldNews/DB): ಜೈಪುರದ ಶ್ರೀ ಸಮ್ಮೇದ್ ಶಿಖರ್ಜಿ ಯಾತ್ರಾ ಕೇಂದ್ರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಜಾರ್ಖಂಡ್ ಸರ್ಕಾರದ ನಿರ್ಧಾರ ವಿರೋಧಿಸಿ ಜೈಪುರದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಜೈನ ಸನ್ಯಾಸಿಯೊಬ್ಬರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.
ಜೈನ ಮುನಿ ಸುಗ್ಯೇಸಾಗರ ಮಹಾರಾಜ್ ಕೊನೆಯುಸಿರೆಳೆದವರು. ಡಿಸೆಂಬರ್ 25ರಿಂದ ಸಂಗನೇರ್ನಲ್ಲಿ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸೋಮವಾರ ಸಂಜೆ ವೇಳೆಗೆ ಅವರ ಆರೋಗ್ಯ ಕ್ಷೀಣಿಸತೊಡಗಿತ್ತು. ಹತ್ತನೇ ದಿನದಂದು ಅವರು ಕೊನೆಯುಸಿರೆಳೆದರು.
ಜೈನ ಸನ್ಯಾಸಿಗಳು ಆತ್ಮಶುದ್ದಿ ಹಾಗೂ ಮೋಕ್ಷಕ್ಕಾಗಿ ಮತ್ತು ಸಮುದಾಯದ ಮೇಲೆ ಹೇರಲಾದ ಅನ್ಯಾಯದ ವಿರುದ್ದ ಪ್ರತಿಭಟಿಸುವ ಸಲುವಾಗಿ ಮರಣದವರೆಗೆ ಉಪವಾಸ ಸತ್ಯಾಗ್ರಹ ಕೈಗೊಂಡರು ಎಂದು ಇದೇ ವೇಳೆ ಸಮುದಾಯದ ಮುಖಂಡರು ತಿಳಿಸಿರುವುದಾಗಿ ವರದಿಯಾಗಿದೆ.