ಬೊಲೆಂಗ್, ಜ 03 (DaijiworldNews/DB): ದೇಶದ ಭೂಪ್ರದೇಶಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಭಾರತಕ್ಕಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬೊಲೆಂಗ್ನಲ್ಲಿ ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ನೆರೆ ರಾಷ್ಟ್ರ ಚೀನಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ನೆರೆ ರಾಷ್ಟ್ರಗಳೊಂದಿಗೆ ಸೌಹಾರ್ದವನ್ನೇ ಬಯಸುವ ಭಾರತ ಯುದ್ದಕ್ಕೆ ಯಾವತ್ತೂ ಪ್ರೋತ್ಸಾಹಿಸುವುದಿಲ್ಲ. ಆದರೆ ದೇಶದ ಭೂಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಭಾರತ ಸವಾಲುಗಳೇನೇ ಬಂದರೂ ಎದುರಿಸಲು ಸಿದ್ದ. ಆ ಸಾಮರ್ಥ್ಯ ನಮ್ಮ ದೇಶಕ್ಕಿದೆ ಎಂದು ಪ್ರತಿಪಾದಿಸಿದರು.
ಭಾರತ ನೆರೆಹೊರೆಯವರೊಂದಿಗೆ ಶಾಂತಿ ಬಯಸುತ್ತದೆ. ಶ್ರೀರಾಮ, ಭಗವಾನ್ ಬುದ್ದ ನೀಡಿದ ತತ್ವ ಇದು. ಆದರೆ ಪ್ರಚೋದಿಸಿದರೆ ಯಾವ ಪರಿಸ್ಥಿತಿಯನ್ನು ಬೇಕಾದರೂ ನಿಭಾಯಿಸಬಲ್ಲ ಶಕ್ತಿ ಭಾರತಕ್ಕಿದೆ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದರು.