ರಾಹ್, ಜ 03 (DaijiworldNews/HR): ಡಿ.30ರಂದು ಪಶ್ಚಿಮ ಬಂಗಾಳದ ಹೌರಾಹ್ ರೈಲ್ವೆ ಸ್ಟೇಶನ್ನಲ್ಲಿ ಚಾಲನೆ ನೀಡಲಾಗಿದ್ದ ಹೌರಾಹ್-ಜಲಪೈಗುರಿ ವಂದೇ ಭಾರತ್ ರೈಲಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ರೈಲಿನ ಬಾಗಿಲಿನ ಗಾಜುಗಳು ಪುಡಿಪುಡಿಯಾಗಿವೆ ಎಂದು ವರದಿಯಾಗಿದೆ.
ರೈಲು ಹೌರಾಹ್ನಿಂದ ಹೊರಟು ಮಾಲ್ಡಾದ ಕುಮಾರ್ಗಂಜ್ ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಕಲ್ಲು ಎಸೆಯಲಾಗಿದ್ದು, ಇದು ಪಶ್ಚಿಮ ಬಂಗಾಳದ ಮೊದಲ ಮತ್ತು ದೇಶದ ಏಳನೇ ವಂದೇ ಭಾರತ್ ರೈಲು.
ಇನ್ನು 2019ರಿಂದ ದೇಶದಲ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾಗಿದ್ದು, ಪ್ರಾರಂಭದಲ್ಲಿ ಎರಡು ಮಾರ್ಗದಲ್ಲಿ ಮಾತ್ರ ಸಂಚರಿಸುತ್ತಿದ್ದ ವಂದೇ ಭಾರತ್ನ್ನು ಈಗ ದೇಶದೆಲ್ಲೆಡೆ ವಿಸ್ತರಿಸಲಾಗುತ್ತಿದೆ.