ಹುಬ್ಬಳ್ಳಿ, ಜ 02 (DaijiworldNews/HR): ಮಹದಾಯಿ ವಿಷಯದಲ್ಲಿ ಬಿಜೆಪಿ ಡಿಪಿಆರ್ ಮಾಡಿಕೊಂಡು ಬಂದಿದ್ದೇವೆ ಅಂತಾ ಹೇಳತ್ತಾ ಇದ್ದಾರೆ. ಆದರೆ ನಿಜವಾಗಿ ನೋಟಿಪೀಕೇಶನ್ ಮಾಡಬೇಕಾದರೇ ಗೋವಾ ಸರ್ಕಾರ ಒಪ್ಪಿಗೆ ಪಡೆದು ಆಗಬೇಕು. ಇದು ಕಣ್ಣು ಒರೆಸುವ ಕೆಲಸ ಎಂದು ಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ಮೇಲ್ಡಂಡೆ ಯೋಜನೆ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಅನುಷ್ಠಾನ ಆಗಬೇಕೆಂಬ ಕಾಂಗ್ರೆಸ್ ಪಕ್ಷದಿಂದ ವಿಜಯಪುರದಲ್ಲಿ ಸಮಾವೇಶ ಮಾಡಿದ್ದೆವು. ಮಹದಾಯಿ ವಿಷಯದಲ್ಲಿ ಬಿಜೆಪಿ ಡಿಪಿಆರ್ ಮಾಡಿಕೊಂಡು ಬಂದಿದ್ದೇವೆ ಅಂತಾ ಹೇಳತ್ತಾ ಇದ್ದಾರೆ. ಆದರೆ ನಿಜವಾಗಿ ನೋಟಿಪೀಕೇಶನ್ ಮಾಡಬೇಕಾದರೇ ಗೋವಾ ಸರ್ಕಾರ ಒಪ್ಪಿಗೆ ಪಡೆದು ಆಗಬೇಕು. ಇದು ಕಣ್ಣು ಒರೆಸುವ ಕೆಲಸ ಎಂದರು.
ಇನ್ನು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಇವರ ವಿಶ್ವಗುರುನೇ ಸುಳ್ಳಿನ ಸರದಾರ, ಅದನ್ನು ಅವರ ಚೇಲಾಗಳು ಸಹ ಕಲಿತುಕೊಂಡಿದ್ದಾರೆ. ಚುನಾವಣೆ ಬಂದಾಗ ಬಿಜೆಪಿಯವರು ನಾಲ್ಕು ಜನಕ್ಕೆ ಕೊಲೆ ಮಾಡಿಸಿ ರಾಜಕಾರಣ ಮಾಡುತ್ತಾರೆ. ಆದರೆ ನಾವು ಅಂತಹ ಜನರಲ್ಲ ಎಂದಿದ್ದಾರೆ.