ನವದೆಹಲಿ, ಜ 02 ( DaijiworldNews/MS): 2016ರ ನೋಟ್ ಅಮಾನ್ಯೀಕರಣ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 58 ಅರ್ಜಿ ವಜಾಗೊಳಿಸಿದ ಸುಪ್ರೀಂ ಪಂಚ ಪೀಠ, 4.1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ. ಆ ಮೂಲಕ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಸಿಂಧು ಎಂದು ಎತ್ತಿ ಹಿಡಿದಿದೆ.
ನ್ಯಾ.ನಜೀರ್ ನೇತೃತ್ವದ ಪಂಚಪೀಠದಲ್ಲಿ ನಾಲ್ವರು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ನ್ಯಾ.ಎಎಸ್ ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ನೋಟ್ ಬ್ಯಾನ್ ಸರಿಯಾದ ಕ್ರಮ ಎಂದು ಹೇಳಿದೆ. ಆದರೆ, ನ್ಯಾ. ನಾಗರತ್ನ ಅವರು ವ್ಯತಿರಿಕ್ತ ತೀರ್ಪು ನೀಡಿದ್ದಾರೆ.
ನೋಟ್ ಬ್ಯಾನ್ ಸಂಸತ್ತಿನಲ್ಲಿ ಚರ್ಚಿಸಬೇಕೆಂದ ಪೀಠ ನೋಟು ಅಮಾನೀಕರಣ ಆರಂಭಿಸಿರುವುದು ಕೇಂದ್ರ ಸರ್ಕಾರವೇ ಹೊರತು ಆರ್ಬಿಐ ಅಲ್ಲ ಎಂದು ನ್ಯಾ. ನಾಗರತ್ನ ಹೇಳಿದ್ದಾರೆ.
ಈ ಕೇಸ್ನಲ್ಲಿ 2ನೇ ತೀರ್ಪು ಓದಿದ ಅವರು, ನೋಟ್ ಬ್ಯಾನ್ಗೆ ಕೇಂದ್ರ ಹಾಗೂ ಆರ್ಬಿಐಗೆ ಅಧಿಕಾರವಿದೆ. ಆದರೆ, ನೋಟ್ ಬ್ಯಾನ್ ಆರ್ಬಿಐಯ ಪರಮಾಧಿಕಾರವಲ್ಲ. ಇನ್ನು ನೋಟ್ ಬ್ಯಾನ್ ನಿರ್ಧಾರವನ್ನು ಗೆಜೆಟ್ ಹೊರಡಿಸುವ ಮೂಲಕ ಮಾಡಬಾರದಿತ್ತು. ಬದಲು ಸಂಸತ್ತಿನಲ್ಲಿ ಚರ್ಚಿಸಿ ಅಂತಿಮ ಶಾಸನಬದ್ಧವಾಗಿ ಜಾರಿಗೆ ತರಬೇಕಿತ್ತೇ ಹೊರತು ಅಧಿಸೂಚನೆಯ ಮೂಲಕ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.