ಬೆಂಗಳೂರು, ಜ 02 ( DaijiworldNews/MS): ಕಾಂಗ್ರೆಸ್ ಈ ಬಾರಿ ಬಿ ಫಾರಂ ಹಂಚುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಿ " ಟಿಕೆಟ್ಗಾಗಿ ಅರ್ಜಿ' ಹಾಕುವ ಯೋಜನೆ ಪ್ರಾರಂಭಿಸಿದ್ದು, ಈಗಾಗಲೇ ನಿರೀಕ್ಷೆಗೆ ಮೀರಿ ರಾಜ್ಯದೆಲ್ಲೆಡೆಯಿಂದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಟ್ವೀಟಿಸಿರುವ ಬಿಜೆಪಿ ಕಾಂಗ್ರೆಸ್ ನಲ್ಲಿ " ಅಧ್ಯಕ್ಷರ ಹಾದಿಯಲ್ಲೇ ಪಕ್ಷದ ಕಾರ್ಯಕರ್ತರೂ ಹೆಜ್ಜೆ ಹಾಕುತ್ತಿದ್ದು, ಟಿಕೆಟ್ ಕೊಟ್ರೆ ‘ಕೈ’ ಕುಲುಕುತ್ತೇವೆ, ಇಲ್ಲಂದ್ರೆ ‘ಕೈ’ ಎತ್ತುತ್ತಾರೆ " ಎಂದು ಬಿಜೆಪಿ ಲೇವಡಿ ಮಾಡಿದೆ.
ಯಥಾ ರಾಜ ತಥಾ ಪ್ರಜಾ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ಹಾದಿಯಲ್ಲೇ ಪಕ್ಷದ ಕಾರ್ಯಕರ್ತರೂ ಹೆಜ್ಜೆ ಹಾಕುತ್ತಿದ್ದಾರೆ. ಟಿಕೆಟ್ ಕೊಟ್ರೆ 'ಕೈ' ಕುಲುಕುತ್ತೇವೆ, ಇಲ್ಲಂದ್ರೆ 'ಕೈ' ಎತ್ತುತ್ತೇವೆ ಅಂತ ಹೊರಟಿದ್ದಾರೆ. ಇನ್ನು ಮುಂದೆ ಇಂಥ ಮನರಂಜನೆಗೆ ಕೊರೆತೆ ಇರುವುದಿಲ್ಲ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.
ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಹಾಕಿ ಎಂದು ಡಿಕೆ ಶಿವಕುಮಾರ್ ಹೇಳಿದ್ದೇ ತಪ್ಪಾಯಿತು. ಗೂಂಡಾಗಳು ಅರ್ಜಿ ಹಾಕಿ, ಕಾಂಗ್ರೆಸ್ ಆಫೀಸನ್ನೇ ಅಡ್ಡ ಮಾಡಿಕೊಂಡಿದ್ದಾರೆ. ಪಕ್ಷದವರಿಗೆ ಇದೆಲ್ಲಾ ರೂಢಿ ಇರಬಹುದು. ಆದರೆ, ರಾಜ್ಯದ ಜನರು ಹೇಗೆ ಸಹಿಸಿಕೊಳ್ಳುವುದು ಹೇಳಿ ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.