ಶ್ರೀನಗರ, ಜ 01 (DaijiworldNews/DB): ಕರ್ತವ್ಯನಿರತ ಯೋಧರಿಂದ ಶಂಕಿತ ಭಯೋತ್ಪಾದಕರು ರೈಫಲ್ ಕಿತ್ತುಕೊಂಡು ಪರಾರಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ನಡೆದಿದೆ.
ಪುಲ್ವಾಮಾದ ರಾಜ್ಪೋರಾದ ಬೆಲ್ಲೋ ಗ್ರಾಮದ ಸೂಕ್ಷ್ಮ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಂಕಿತರು ಯೋಧರ ಬಳಿ ಇದ್ದ ರೈಫಲ್ನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಶಂಕಿತ ಕಿತ್ತುಕೊಂಡ ರೈಫಲ್ ಸಿಆರ್ಪಿಎಫ್ ಪಡೆ 183 ಬೆಟಾಲಿಯನ್ಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಶಂಕಿತರಿಗಾಗಿ ಇದೀಗ ಶೋಧ ಕಾರ್ಯ ನಡೆಯುತ್ತಿದ್ದು, ಘಟನಾ ಪ್ರದೇಶದಲ್ಲಿ ನಾಕಾಬಂದಿ ಹಾಕಲಾಗಿದೆ.