ನಾಗಪುರ, ಡಿ 31 (DaijiworldNews/DB): 50 ಶಾಸಕರನ್ನು ಉದ್ದವ್ ಠಾಕ್ರೆಯವರ ಮೂಗಿನಡಿಯೇ ಸೆಳೆದು ಸರ್ಕಾರ ರಚಿಸಿರುವ ನಮಗೆ ಅವರ ಬಗ್ಗೆ ಯಾವುದೇ ಭೀತಿ ಇಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಲೇವಡಿ ಮಾಡಿದ್ದಾರೆ.
32 ವರ್ಷ ವಯಸ್ಸಿನ ತನಗೇ ರಾಜ್ಯ ಸರ್ಕಾರ ಹೆದರುತ್ತಿದೆ ಎಂಬ ಶಿವಸೇನಾ ನಾಯಕ ಆದಿತ್ಯ ಠಾಕ್ರೆಯವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆದಿತ್ಯ ಠಾಕ್ರೆ ತಂದೆ ಬಗ್ಗೆಯೇ ನಮಗೆ ಯಾವುದೇ ಆತಂಕವಿಲ್ಲ. ಇನ್ನು ಅವರ ಬಗ್ಗೆ ಯಾಕೆ ಆತಂಕ ಪಡಬೇಕು. ನಾವು ಅವರ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದಾಗ ಮುಂಬೈ ಹೊತ್ತಿ ಉರಿಯುತ್ತದೆ ಎಂದು ಅವರು ಹೇಳಿದ್ದರು. ಆದರೆ ಬೆಂಕಿ ಕಡ್ಡಿ ಕೂಡಾ ಉರಿದಿಲ್ಲ ಎಂದರು.
ಸಿದ್ದಿವಿನಾಯಕ ದೇವಾಲಯ ಟ್ರಸ್ಟ್ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದೆ. ಮುಂದಿನ ಒಂದು ತಿಂಗಳೊಳಗೆ ತನಿಖೆ ಅಂತಿಮಗೊಳಿಸಲಾಗುವುದು ಎಂದವರು ಹೇಳಿದ್ದಾರೆ.