ನವದೆಹಲಿ, ಡಿ 31 ( DaijiworldNews/MS): ಬಿಹಾರದ ಸರನ್ ಜಿಲ್ಲೆಯ ಚಪ್ರಾದಲ್ಲಿ ಸುಮಾರು 80 ಜನರನ್ನು ಬಲಿ ತೆಗೆದುಕೊಂಡ ನಕಲಿ ಮದ್ಯ ಪ್ರಕರಣಗಳ ಮಾಸ್ಟರ್ ಮೈಂಡ್ ವ್ಯಕ್ತಿಯನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಶನಿವಾರ ಬಂಧಿಸಿದೆ.
ಈ ತಿಂಗಳ ಆರಂಭದಲ್ಲಿ ಛಾಪ್ರಾ ಜಿಲ್ಲೆಯಲ್ಲಿ ಕನಿಷ್ಠ 78 ಜನರು ಮತ್ತು ಸರನ್ನಲ್ಲಿ 38 ಜನರು ನಕಲಿ ಮದ್ಯ ಸೇವಿಸಿ ಪ್ರಾಣ ಕಳೆದುಕೊಂಡಿದ್ದರು.
ದೆಹಲಿ ಪೊಲೀಸ್ ಅಪರಾಧ ವಿಭಾಗದ ಪ್ರಕಾರ, ಮಶ್ರಕ್ ಠಾಣೆಯಲ್ಲಿ ಮತ್ತು ಸರನ್ ಜಿಲ್ಲೆಯ ಇಸುಪುರ್ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ರಾಮ್ ಬಾಬು ಮಹ್ತೋ ಮೋಸ್ಟ್ ವಾಂಟೆಡ್ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ.
ಇದುವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಈತ ಹಲವಾರು ಅಕ್ರಮ ಮದ್ಯದ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆತನನ್ನು ದೆಹಲಿಯ ದ್ವಾರಕಾ ಪ್ರದೇಶದಿಂದ ಬಂಧಿಸಲಾಗಿದೆ.
ಬಂಧನದ ಮಾಹಿತಿಯನ್ನು ಬಿಹಾರ ಪೊಲೀಸರೊಂದಿಗೆ ಹೆಚ್ಚಿನ ಮಾಹಿತಿಗಾಗಿ ಹಂಚಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ತಿಳಿಸಿದೆ.