ತಿರುವನಂತಪುರಂ, ಡಿ 30 (DaijiworldNews/DB): ನೆರೆಹೊರೆ ದೇಶಗಳೊಂದಿಗೆ ಭಾರತ ಸೌಹಾರ್ದ ಸಂಬಂಧವನ್ನೇ ಬಯಸುತ್ತದೆ. ಆದರೆ ರಾಷ್ಟ್ರೀಯ ಭದ್ರತೆ ವಿಚಾರ ಬಂದಾಗ ಎಂದಿಗೂ ರಾಜಿಯಾಗುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಲ್ಲಿನ ಶಿವಗಿರಿ ಮಠದ 90ನೇ ವಾರ್ಷಿಕ ಯಾತ್ರೆಯಲ್ಲಿ ಮಾತನಾಡಿದ ಅವರು, ಸ್ನೇಹಿತರನ್ನು ಬದಲಾಯಿಸಬಹುದು. ನೆರೆಹೊರೆಯವರನ್ನು ಬದಲಾಯಿಸಲಾಗದು. ಸೌಹಾರ್ದ ಸಂಬಂಧ ತೀರಾ ಅಗತ್ಯ. ಆದರೆ ನೆರೆಹೊರೆ ದೇಶಗಳೊಂದಿಗೆ ಸೌಹಾರ್ದವನ್ನೇ ಬಯಸುವ ಭಾರತ ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ವಿಶ್ವದ ಅಗ್ರ ಐದು ಆರ್ಥಿಕ ರಾಷ್ಟ್ರಗಳಲ್ಲಿ ನಾವೂ ಒಂದಾಗಿದ್ದೇವೆ. ನಮ್ಮ ಆತ್ಮನಿರ್ಭರ ನೀತಿಯೇ ಇದಕ್ಕೆ ಕಾರಣವಾಗಿದೆ ಎಂದವರು ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ರಕ್ಷಣಾ ಸಚಿವರು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.