ಬೆಂಗಳೂರು, ಡಿ 30 ( DaijiworldNews/MS): ಕರ್ನಾಟಕ ಚುನಾವಣೆ ರಂಗ ಪ್ರವೇಶ ಮಾಡಲು ಕರ್ನಾಟಕ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಪ್ರಚಾರ ನಡೆಸಲು ಪ್ಲಾನ್ ರೆಡಿ ಮಾಡಿಕೊಂಡಿದೆ.
ಕಾಂಗ್ರೆಸ್ ಮುಖ್ಯವಾಗಿ ರಾಜ್ಯದ ಮಹಿಳೆಯರ ಸಮಸ್ಯೆಗಳು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ, ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳು, ಶಿಕ್ಷಣ , ಆರೋಗ್ಯ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸಿದ್ದತೆ ಮಾಡಿಕೊಂಡಿದೆ.
ಕಾಂಗ್ರೆಸ್ ಹಲವು ಜಾಥಾ, ಸಮಾವೇಶಗಳನ್ನು ಆಯೋಜಿಸಲಿದ್ದು, ಕೃಷಿ, ಮೂಲಭೂತ ಸೌಕರ್ಯಗಳನ್ನು ಬಿಜೆಪಿ ಸರ್ಕಾರ ಕಡೆಗಣಿಸಿರುವ ಬಗ್ಗೆ ಪ್ರಚಾರದ ವೇಳೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಿದೆ ಎನ್ನಲಾಗಿದೆ.