ಕೇರಳ, ಡಿ 30 (DaijiworldNews/DB): ಪ್ರವಾಹವನ್ನು ಎದುರಿಸುವ ಸಂಬಂಧ ವಿಪತ್ತು ನಿರ್ವಹಣಾ ಏಜೆನ್ಸಿಗಳ ಸನ್ನದ್ದತೆಯನ್ನು ನಿರ್ಣಯಿಸುವ ಸಲುವಾಗಿ ಮಧ್ಯ ಕೇರಳ ಜಿಲ್ಲೆಯ ನದಿಯಲ್ಲಿ ಆಯೋಜಿಸಲಾದ ಅಣುಕು ಕಾರ್ಯಾಚರಣೆಯು ದುರಂತಕ್ಕೆ ಕಾರಣವಾಗಿದೆ. ಸ್ವಯಂಸೇವಕರೊಬ್ಬರು ಈ ಅಣುಕು ಕಾರ್ಯಾಚರಣೆ ವೇಳೆಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಬಿನು ಸೋಮನ್ (34 ) ಸಾವನ್ನಪ್ಪಿದವರು. ಕೀಜ್ವೈಪುರ ಬಳಿಯ ಮಣಿಮಾಲಾ ನದಿಯಲ್ಲಿ ಅಣಕು ಡ್ರಿಲ್ನಲ್ಲಿ ಭಾಗವಹಿಸಿದ್ದಾಗ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಅವರನ್ನು ರಕ್ಷಿಸಿ ತಿರುವಲ್ಲಾದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಪ್ರವಾಹ ಮತ್ತು ಭೂಕುಸಿತ ಎದುರಿಸಲು ವಿಪತ್ತು ನಿರ್ವಹಣಾ ತಂಡದ ಸನ್ನದ್ದತೆ ನಿರ್ಣಯಿಸುವ ಭಾಗವಾಗಿ ಗುರುವಾರ ಪಥನಂತಿಟ್ಟ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಅಣಕು ಡ್ರಿಲ್ಗಳನ್ನು ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.