ಬೆಳಗಾವಿ, ಡಿ 29 (DaijiworldNews/DB): ಅಡಿಕೆ ಬೆಳೆಗೆ ಹೆಚ್ಚು ಭವಿಷ್ಯವಿಲ್ಲ, ಈ ಬೆಳೆಗೆ ಪ್ರೋತ್ಸಾಹ ನೀಡಬಾರದು ಎಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇನ್ನು ಸಚಿವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ಇನ್ನು ಸಚಿವರ ಹೇಳಿಕೆಗೆ ಸದನದಲ್ಲೇ ಟೀಕೆ ವ್ಯಕ್ತವಾಗಿದ್ದು, ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಪ್ರತಿಕ್ರಿಯಿಸಿ, ನಾವೂ ಅಡಿಕೆ ಬೆಳೆಗಾರರು. ಅಡಿಕೆಗೆ ಪ್ರೋತ್ಸಾಹ ನೀಡಬಾರದೆಂದರೆ ನಮ್ಮಂತಹ ಅಡಿಕೆ ಬೆಳೆಗಾರರ ಗತಿಯೇನು? ಎಂದು ಪ್ರಶ್ನಿಸಿದರು.
ಅಡಿಕೆಗೆ ಪ್ರೋತ್ಸಾಹ ನೀಡಬಾರದು ಎಂದರೆ ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವವರು ಏನು ಮಾಡಬೇಕು? ಪ್ರೋತ್ಸಾಹ ನೀಡಬಾರದು ಎನ್ನುವ ಬದಲಿ ಕೃಷಿಕರಿಗೆ ಪ್ರೋತ್ಸಾಹಿಸಿ, ಕೃಷಿಗೆ ಮಾನ್ಯತೆ ನೀಡಿ ಎಂದು ಆಗ್ರಹಿಸಿದರು.
ಇನ್ನು ಗೃಹ ಸಚಿವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ವಿಶೇಷವಾಗಿ ಕರಾವಳಿ ಭಾಗದ ಜನರು ಸಚಿವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.