ಚೆನ್ನೈ, ಡಿ 28 (DaijiworldNews/DB): ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಪ್ರಾಮುಖ್ಯತೆ ಕಳೆದುಕೊಂಡಿಲ್ಲ. ಬಿಜೆಪಿಯ ಸಂಕುಚಿತ ರಾಜಕಾರಣಕ್ಕೆ ರಾಹುಲ್ ಗಾಂಧಿಯವರೇ ಅತ್ಯುತ್ತಮ ಮದ್ದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಭಾರತಕ್ಕೆ ಕಾಮಗ್ರೆಸ್ ಅಗತ್ಯವಾಗಿ ಬೇಕಾಗಿದೆ. ಹಳೆಯ ಪಕ್ಷವೊಂದು ಮತ್ತೆ ಚಿಗುರುವ ಹಾದಿಯಲ್ಲಿರುವುದು ದೇಶದ ಹಿತ ದೃಷ್ಟಿಯಿಂದ ಅಗತ್ಯ ಮತ್ತು ಅನಿವಾರ್ಯವೂ ಆಗಿದೆ. ಬಿಜೆಪಿಯು ದೇಶದಲ್ಲಿ ಸಂಕುಚಿತ ರಾಜಕಾರಣ ನಡೆಸುತ್ತಿದೆ. ಅದಕ್ಕೆ ರಾಹುಲ್ ಗಾಂಧಿಯವರೇ ಅತ್ಯುತ್ತಮವಾದ ಮದ್ದು ಎಂದವರು ಪ್ರತಿಪಾದಿಸಿದರು.
ದೇಶದ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಹಾಗಾಗಲು ಬಿಜೆಪಿ ವಿರುದ್ದ ಹೋರಾಡಬೇಕು. ರಾಷ್ಟ್ರೀಯ ಮೈತ್ರಿ ರಚನೆಯಿಂದ ಇದು ಸಾಧ್ಯವಾಗಲಿದೆ ಎಂದು ಪ್ರತಿಪಕ್ಷಗಳ ರಾಷ್ಟ್ರೀಯ ಮೈತ್ರಿ ಪರ ಬ್ಯಾಟಿಂಗ್ ನಡೆಸಿದ್ದಾರೆ.