ಮುಂಬೈ, ಡಿ 28 (DaijiworldNews/DB): ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಂದಾ ಕೊಚ್ಚಾರ್ ಸಹಿತ ಮೂವರ ಸಿಬಿಐ ಕಸ್ಟಡಿಯನ್ನು ಎರಡು ದಿನಗಳ ಕಾಲ ವಿಸ್ತರಿಸಿ ಮುಂಬೈ ನ್ಯಾಯಾಲಯ ಆದೇಶಿಸಿದೆ.
ಚಂದಾ ಕೊಚ್ಚಾರ್, ದೀಪಕ್ ಕೊಚ್ಚರ್ ಮತ್ತು ವೇಣುಗೋಪಾಲ್ ಧೂತ್ ಅವರ ಸಿಬಿಐ ಕಸ್ಟಡಿ ವಿಸ್ತರಣೆಯಾಗಿದೆ. ಡಿಸೆಂಬರ್ 24ರಂದು ಬಂಧಿಸಲ್ಪಟ್ಟಿದ್ದ ಕೊಚ್ಚರ್ ದಂಪತಿ ಹಾಗೂ ಡಿಸೆಂಬರ್ 26ರಂದು ಬಂಧಿಸಲ್ಪಟ್ಟಿದ್ದ ಧೂತ್ ಅವರನ್ನು ಮತ್ತೆ ಎರಡು ದಿನ ಸಿಬಿಐ ಕಸ್ಟಡಿಗೆ ವಹಿಸಲಾಗಿದೆ.
ವಿಡಿಯೋಕಾನ್ ಗ್ರೂಪ್ಗೆ 2012ರಲ್ಲಿ ನೀಡಲಾದ 3,250 ಕೋಟಿ ರೂ. ಐಸಿಐಸಿಐ ಬ್ಯಾಂಕ್ ಸಾಲದಲ್ಲಿ ವಂಚನೆ ಎಸಗಲಾಗಿದೆ ಮತ್ತು ಅಕ್ರಮ ನಡೆದಿದೆ ಎಂಬ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಈ ಸಾಲ ಮಂಜೂರು ಮಾಡುವಲ್ಲಿ ಕೊಚ್ಚರ್ ದಂಪತಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಮತ್ತು ಆರ್ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.