ಬೆಳಗಾವಿ, ಡಿ 28 (DaijiworldNews/DB): ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಬುಧವಾರ ಮೋಟಾರ್ ಬೈಕ್ನಲ್ಲಿ ಹಿಂಬದಿ ಸವಾರರಾಗಿ ಸಂಚರಿಸಿದರು.
ಅತಿಯಾದ ಟ್ರಾಫಿಕ್ ಜಾಮ್ ಮತ್ತು ವಾಹನದಟ್ಟಣೆಯಿಂದಾಗಿ ಸಚಿವರು ಬೈಕ್ನಲ್ಲಿ ತೆರಳಿದರು. ಆದರೆ, ಸಚಿವರಾಗಲೀ ಅಥವಾ ಮೋಟಾರು ಬೈಕ್ ಚಾಲಕರಾಗಲೀ ಹೆಲ್ಮೆಟ್ ಧರಿಸದೇ ಬೆಳಗಾವಿಯತ್ತ ಸಂಚರಿಸಿದ್ದಾರೆ.
ಹೆದ್ದಾರಿಯಲ್ಲೇ ಬೈಕ್ನಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸಿದ ಸಚಿವರ ಈ ನಡೆಯಿಂದ ಹೆಲ್ಮೆಟ್ ಕಡ್ಡಾಯ ನಿಯಮ ಕೇವಲ ಜನಸಾಮಾನ್ಯರಿಗಷ್ಟೇ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.