ಬೆಂಗಳೂರು, ಡಿ 27 (DaijiworldNews/HR): ನಾನು ಒಂದಿಂಚು ಭೂಮಿಯನ್ನ ಸಹ ಬಿಟ್ಟುಕೊಡುವುದಿಲ್ಲ ಎಮ್ದು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆ ನಿರ್ಣಯವನ್ನುಅಂಗೀಕರಿಸಿದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಏಕನಾಥ್ ಶಿಂಧೆ ಸರ್ಕಾರವು ಇಂತಹ ಕ್ರಮಗಳಿಗೆ ಮೊರೆ ಹೋಗುತ್ತಿದೆ. ಯಾಕಂದರೆ ಈ ಪ್ರಕರಣದಲ್ಲಿ ಅವರ ವಾದಗಳು ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿದ್ದು, ತುಂಬಾ ದುರ್ಬಲವಾಗಿದೆ ಎಂದರು.
ಇನ್ನು ಕರ್ನಾಟಕದ ಒಂದಿಂಚೂ ಭೂಮಿಯನ್ನ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಕರ್ನಾಟಕ ಸರ್ಕಾರವು ಪ್ರತಿ ಇಂಚು ಭೂಮಿಯನ್ನ ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಕರ್ನಾಟಕದೊಂದಿಗಿನ ವಿವಾದಾತ್ಮಕ ಗಡಿ ಪ್ರದೇಶದಲ್ಲಿ ವಾಸಿಸುವವರಿಗೆ ಒಗ್ಗಟ್ಟನ್ನ ವ್ಯಕ್ತಪಡಿಸುವ ನಿರ್ಣಯವನ್ನ ಅಂಗೀಕರಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ನಿರ್ಣಯವನ್ನು ಮಂಡಿಸಿದ್ದಾರೆ.