ಚಿಕ್ಕಮಗಳೂರು, ಡಿ 25 (DaijiworldNews/HR): ಪಕ್ಷ ಕಟ್ಟಲು ಹಾಗೂ ಚುನಾವಣೆ ಸ್ಪರ್ಧಿಸಲು ಎರಡಕ್ಕೂ ಎರಲ್ಲರಿಗೂ ಅವಕಾಶವಿದೆ. ಇದರಲ್ಲಿ ಮತದಾರರೇ ಪ್ರಭುಗಳು. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದರ ಮೇಲೆ ನಿರ್ಣಾಯವಾಗುತ್ತದೆ ಎಂದು ಜನಾರ್ದನ ರೆಡ್ಡಿ ಅವರ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಘೋಷಣೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೆಲವೊಂದು ವಿಷಯವನ್ನು ಇವತ್ತೇ ಜಡ್ಜ್ ಮೆಂಟ್ ಕೊಡಲು ಬರಲ್ಲ. ಕಾಲ ಕೆಲವನ್ನು ನಿರ್ಣಯ ಮಾಡುತ್ತದೆ. ಕಾಲವನ್ನು ನಾವೆಲ್ಲ ಕಾದು ನೋಡಬೇಕಾಗುತ್ತದೆ ಎಂದರು.
ಇನ್ನು ನಾನು ವೈಯುಕ್ತಿಕ ವಿಷಯದಲ್ಲಿ ಭೇಟಿಯಾಗಿಲ್ಲ. ಸಂಬಂಧ ಕೆಟ್ಟಿದೆ ಎಂದು ನಾನು ಹೇಳಲ್ಲ, ಇತ್ತೀಚಿನ ದಿನದಲ್ಲಿ ಭೇಟಿಯಾಗಿಲ್ಲ. ಯಾರು ಬೇಕಾದರೂ ಸ್ಪರ್ಧೆ ಮಾಡಲು ಅವಕಾಶ ಇದೆ ಎಂದಿದ್ದಾರೆ.