ಉತ್ತರ ಪ್ರದೇಶ, ಡಿ 25 (DaijiworldNews/HR): ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹಿರಿಯ ದಂಪತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ವರ್ಷದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬಂಧ್ತರನ್ನು 12 ವರ್ಷದ ಅಪ್ರಾಪ್ತ ಬಾಲಕ ಸೇರಿ ಮಂಜೇಶ್, ಶಿವಂರನ್ನು ಎಂದು ಗುರುತಿಸಲಾಗಿದ್ದು, ನಾಲ್ಕನೇ ಆರೋಪಿ ಸಂದೀಪ್ ಪರಾರಿಯಾಗಿದ್ದಾನೆ.
ಗುಜರಿ ವ್ಯಾಪಾರಿ ಇಬ್ರಾಹಿಂ ಹಾಗೂ ಅವರ ಪತ್ನಿ ಹಜ್ರಾ ಅವರು ನ.22 ರಂದು ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಬ್ರಾಹಿಂ ಅವರ ದೇಹ ಮನೆಯಲ್ಲಿ ಪತ್ತೆಯಾಗಿತ್ತು. ಅವರ ಪತ್ನಿಯ ದೇಹ ಜಮೀನಿನ ಶೌಚಾಲಯದ ಬಳಿ ಪತ್ತೆಯಾಗಿತ್ತು.
ಇನ್ನು ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಈ ಕೃತ್ಯದ ಹಿಂದೆ ಇದ್ದ 12 ವರ್ಷದ ಬಾಲಕನನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಕೃತ್ಯದ ಹಿಂದಿನ ಕಾರಣ ಬಯಲಾಗಿದೆ.
ಬಾಲಕನು ಹಿರಿಯ ದಂಪತಿಗೆ ಪರಿಚಯಸ್ಥನಾಗಿದ್ದು, ದಂಪತಿಗಳು ಗುಜರಿ ವ್ಯಾಪಾರ ಮಾಡಿಕೊಂಡು ಸಾಕಷ್ಟು ಹಣ ಉಳಿಸಿಕೊಂಡು ಇದ್ದಾರೆಂದು ಬಾಲಕ ತಿಳಿದುಕೊಂಡಿದ್ದು, ಈ ವಿಚಾರವನ್ನು ಇತರ ಮೂವರ ಬಳಿ ಹೇಳಿ ದರೋಡೆಗೆ ಯೋಜನೆ ಹಾಕಿಕೊಂಡಿದ್ದ. ನಂತರ ಬಾಲಕ ಸೇರಿ ಮೂವರು ಈ ಕೃತ್ಯವನ್ನು ಎಸಗಿದ್ದಾರೆ.
ಇನ್ನು ಬಂಧಿತ ಆರೋಪಿಗಳಿಂದ 12 ಸಾವಿರ ರೂ. ಒಂದು ಮೊಬೈಲ್ ಹಾಗೂ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.