ನವದೆಹಲಿ, ಡಿ 23 (DaijiworldNews/HR): ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಜೀವಮಾನದಲ್ಲಿ ಒಮ್ಮೆಯಾದರೂ ನೋಡಬೇಕು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಟ್ವೀಟ್ ಮಾಡಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯವು ಪೋಸ್ಟರ್ ವೊಂದನ್ನು ಹಂಚಿಕೊಂಡಿದ್ದು, ಕಂಬಳ ಕರಾವಳಿ ಕರ್ನಾಟಕದ ರೈತ ಸಮುದಾಯದ ನೆಚ್ಚಿನ ಕ್ರೀಡೆಯಾಗಿದ್ದು, ವಾರ್ಷಿಕ ಕ್ರೀಡೆಯಾಗಿ ಕಂಬಳ ಓಟವನ್ನು ಆಯೋಜಿಸುತ್ತಾರೆ. 150ಕ್ಕೂ ಹೆಚ್ಚು ಜೋಡಿ ಕೋಣಗಳು ತರಬೇತಿ ಪಡೆದು ಇದರಲ್ಲಿ ಪಾಲ್ಗೊಳ್ಳುತ್ತವೆ ಎಂದು ಹೇಳಿದೆ.
ಇನ್ನು ಗ್ರಾಮಸ್ಥರಿಗೆ ಮತ್ತು ಪ್ರವಾಸಿಗರಿಗೆ ಇದೊಂದು ಮರೆಯಲಾಗದ ಸಂದರ್ಭವಾಗಿದ್ದು, ನೀವು ಇದಕ್ಕೂ ಮುಂಚೆ ಯಾವತ್ತಾದರೂ ಕಂಬಳ ನೋಡಿದ್ದೀರಾ ಎಂದು ಪ್ರಶ್ನಿಸಿದೆ.
ಗೇಮ್ಸ್ ಆಫ್ ಇಂಡಿಯಾ ಮತ್ತು ಅಮೃತ ಮಹೋತ್ಸವ ಹ್ಯಾಷ್ ಟ್ಯಾಗ್ನಲ್ಲಿ ಮಾಡಿರುವ ಟ್ವೀಟನ್ನು ಹಲವರು ರೀಟ್ವೀಟ್ ಮಾಡಿದ್ದು, ಲೈಕ್ ಮತ್ತು ಕಮೆಂಟ್ ಕೂಡ ಮಾಡಿದ್ದಾರೆ.