ನವದೆಹಲಿ, ಡಿ 22 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ನವ ಭಾರತದ ರಾಷ್ಟ್ರಪಿತ ಎಂಬ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವಿಸ್ ಹೇಳಿಕೆಗೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಕಿಡಿ ಕಾರಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಅವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಕೇವಲ ತಮಗೆ ಬೇಕಾದ ಸ್ನೇಹಿತರನ್ನು ಶ್ರೀಮಂತರನ್ನಾಗಿಸುವುದೇ ಬಿಜೆಪಿಯ ನವ ಭಾರತ. ಬಡವರು ಹಸಿವಿನಿಂದ ಬಳಲುವ ನವ ಭಾರತ ನಮಗೆ ಬೇಕಾಗಿಲ್ಲ ಎಂದು ಪಟೋಲೆ ತಿರುಗೇಟು ನೀಡಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೃತಾ ಫಡ್ನವಿಸ್, ಭಾರತಕ್ಕೆ ಇಬ್ಬರು ರಾಷ್ಟ್ರಪಿತರು. ಮಹಾತ್ಮಾ ಗಾಂಧೀಜಿಯವರು ರಾಷ್ಟ್ರಪಿತರಾದರೆ, ಪ್ರಧಾನಿ ನರೇಂದ್ರ ಮೋದಿಯವರು ನವ ಭಾರತದ ರಾಷ್ಟ್ರಪಿತ ಎಂದಿದ್ದರು.