ಗೋವಾ, ಡಿ 22 (daijiworldNews/HR): ಅಕ್ರಮ ನಿರ್ಮಾಣಗಳ ಆರೋಪದ ಮೇಲೆ ಟಾಲಿವುಡ್ ನಟ ನಾಗಾರ್ಜುನ ಅವರಿಗೆ ಗೋವಾ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ತೆಲಂಗಾಣ ಸರ್ಕಾರ ರೈತರಿಗೆ ನೀಡುತ್ತಿರುವ ರೈತ ಬಂಧು ಯೋಜನೆಯಿಂದ ನಾಗಾರ್ಜನ ಕುಟುಂಬ ಲಾಭ ಪಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಇದೀಗ ಗೋವಾ ರಾಜ್ಯದ ಗ್ರಾಮ ಪಂಚಾಯಿತಿಯೊಂದು ನಾಗಾರ್ಜುನ ಅವರಿಗೆ ಅಕ್ರಮ ನಿರ್ಮಾಣಗಳ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದೆ.
ಇನ್ನು ಗೋವಾದ ಮಂಡ್ರೆಮ್ ಪಂಚಾಯತ್ ಬುಧವಾರ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು, ಅಶ್ವೇವಾಡ ಗ್ರಾ.ಪಂ.ವ್ಯಾಪ್ತಿಯ 211/2 ಬಿ.ನಲ್ಲಿ ಇವರ ನಿರ್ದೇಶನದ ಮೇರೆಗೆ ಅಕ್ರಮ ನಿರ್ಮಾಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.