ಬೆಂಗಳೂರು, ಡಿ 20 ( DaijiworldNews/MS): ಬಿಜೆಪಿ ಅಂದ್ರೆ "Bಬಂಡಾಯ Jಜನತಾ Pಪಾರ್ಟಿ" ಎಂದಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಚಿವ ಸಂಪುಟಕ್ಕೆ ನನ್ನನ್ನು ತೆಗೆದುಕೊಳ್ಳದ್ದಕ್ಕೆ ನೋವುಂಟು ಮಾಡಿದ್ದುಆದ್ದರಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನದಿಂದ ದೂರ ಉಳಿಯುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದು ಈ ವಿಚಾರವಾಗಿ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ.
ಕೆ.ಎಸ್. ಈಶ್ವರಪ್ಪಹಾಗೂ ರಮೇಶ್ ಜಾರಕಿಹೊಳಿ ಅವರು ಮಂತ್ರಿಗಿರಿ ಕೊಡದ ಸಿಎಂ ವಿರುದ್ಧದ ಪ್ರತಿಭಟನೆಗಾಗಿ ಅಧಿವೇಶನಕ್ಕೆ ಬರಲಿಲ್ಲವಂತೆ! ಬಿಜೆಪಿ ನಾಯಕರಿಗೆ ಕುರ್ಚಿ, ಸ್ವಾರ್ಥ ಮುಖ್ಯವೇ ಹೊರತು ಜನರ ವಿಚಾರವಲ್ಲ ಬಿಜೆಪಿvsಬಿಜೆಪಿ ಕಿತ್ತಾಟದಲ್ಲಿ ಬಿಜೆಪಿ ಛಿದ್ರವಾಗುವುದು ನಿಶ್ಚಿತ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಲೇವಡಿ ಮಾಡಿದೆ.
ಕಳೆದ ಅಧಿವೇಶನದಲ್ಲೂ ಗೈರಾಗಿದ್ದ ಕೆ.ಎಸ್ ಈಶ್ವರಪ್ಪ ಅವರಿಗೆ ಸ್ಪೀಕರ್ ಕಾರಣ ಕೇಳಿ ನೋಟಿಸ್ ನೀಡಿದ್ದರು. ಈಗಲೂ 'ವೈಯುಕ್ತಿಕ ಕಾರಣ' ಹೇಳಿ ಗೈರಾಗಿದ್ದಾರೆ, ಆದರೆ ಹೊರಗೆ ಇದು ನನ್ನ ಪ್ರತಿಭಟನೆ ಎಂದಿದ್ದಾರೆ. ಒಬ್ಬ ಶಾಸಕನಾಗಿ ತನ್ನ ಜವಾಬ್ದಾರಿಯ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಜೆಪಿ ಕರ್ನಾಟಕ ನಾಯಕರ ಅದ್ಯತೆಯೇ ಅಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ , "ಮುರುಗೇಶ್ ನಿರಾಣಿ ಪೇಮೆಂಟ್ ಕೋಟಾದಲ್ಲಿ ಮಂತ್ರಿಯಾದವರು" - ಯತ್ನಾಳ್. ನಿರಾಣಿಯವರು #ಪೇ ಸಿಎಂ ಮಾಡಿದಾರಾ? ಅಥವಾ ಪೇ ಪಿಎಂ ಮಾಡಿದಾರಾ? ಯಾರಿಗೆ? ಎಷ್ಟು ಹಣ ನೀಡಿದ್ದಾರೆ? ಬಿಜೆಪಿಯಲ್ಲಿ ಎಲ್ಲವೂ ಪೇಮೆಂಟ್ ಆಧಾರದಲ್ಲಿಯೇ ನಡೆಯುತ್ತಿರುವುದು ಎಂಬುದು ಇತ್ತೀಚಿನ ಬಿಜೆಪಿvsಬಿಜೆಪಿ ಕಿತ್ತಾಟದಲ್ಲಿ ಹೊರಬರುತ್ತಿದೆ. ಆದರೆ ತನಿಖೆ ಮಾತ್ರ ಇಲ್ಲವೇಕೆ?" ಎಂದು ಪ್ರಶ್ನಿಸಿದೆ.