ಜೈಪುರ, ಡಿ 20 ( DaijiworldNews/MS): "ಭಾರತ್ ಜೋಡೋ ಯಾತ್ರೆ ಏಕೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿರುವ ಬಿಜೆಪಿ ನಾಯಕರಿಗೆ , ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಉತ್ತರ ನೀಡಿದ್ದು, "ನಾನು ಅಂಗಡಿಯನ್ನು ತೆರೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯ ರಾಜಸ್ಥಾನದ ಅಲ್ವಾರ್ನಲ್ಲಿ, ಈ ವ್ ಏಳೆ ಮಾತನಾಡಿದ ರಾಹುಲ್, " ನಾನು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುತ್ತಿದ್ದೇನೆ, ನಾನೇಕೆ ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಕೇಳುವ ಬಿಜೆಪಿ ನಾಯಕರಿಗೆ ಇದು ನನ್ನ ಪ್ರತಿಕ್ರಿಯೆ" ಎಂದು ಹೇಳಿದ್ದಾರೆ.
ಇಂಗ್ಲಿಷ್ ಭಾಷೆಗೆ ಒತ್ತು ನೀಡಿರುವ ಬಗ್ಗೆ ವಿವಾದಕ್ಕೆ ಸಿಲುಕಿರುವ ರಾಹುಲ್ ಇದೇ ವೇಳೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ನೀವು ಪ್ರಪಂಚದ ಇತರ ಜನರೊಂದಿಗೆ ಮಾತನಾಡಲು ಬಯಸಿದರೆ, ಹಿಂದಿ ಬಳಸಲು ಆಗುವುದಿಲ್ಲ. ಆದ ಇಂಗ್ಲಿಷ್ ಕೆಲಸ ಮಾಡುತ್ತದೆ. ಬಡ ರೈತರು ಮತ್ತು ಕಾರ್ಮಿಕರ ಮಕ್ಕಳು ಅಮೆರಿಕನ್ನರೊಂದಿಗೆ ಸ್ಪರ್ಧಿಸಲು ಮತ್ತು ಅವರ ಭಾಷೆಯನ್ನು ಬಳಸಿಕೊಂಡೇ ಅವರನ್ನು ಗೆಲ್ಲಲು ನಾವು ಬಯಸುತ್ತೇವೆ".
"ರಾಜಸ್ಥಾನದಲ್ಲಿ 1,700 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿರುವುದು ನನಗೆ ಖುಷಿ ತಂದಿದೆ , ಬಿಜೆಪಿ ನಾಯಕರಿಗೆ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲು ಇಷ್ಟವಿಲ್ಲ, ಆದರೆ ಅವರ ಎಲ್ಲಾ ನಾಯಕರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ, ವಾಸ್ತವವಾಗಿ, ಅವರು ಬಡ ರೈತರು ಮತ್ತು ಕಾರ್ಮಿಕರ ಮಕ್ಕಳು ಬಯಸುವುದಿಲ್ಲ. ಇಂಗ್ಲಿಷ್ ಕಲಿಯಿರಿ, ದೊಡ್ಡ ಕನಸುಗಳನ್ನು ಕಂಡು ನನಸಾಗಿಸಿ" ಎಂದು ಹೇಳಿದ್ದಾರೆ.