ಬಿಹಾರ, ಡಿ 19 (DaijiworldNews/DB): ಅಕ್ರಮ ಮದ್ಯ ಸೇವಿಸಿ ಬಿಹಾರದಲ್ಲಿ 70 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳ ತಂಡವು ಮದ್ಯ ಕಳ್ಳಸಾಗಣೆದಾರನನ್ನು ಬಂಧಿಸಿದ್ದಾರೆ.
ಅಖಿಲೇಶ್ ಕುಮಾರ್ ಯಾದವ್ ಅಲಿಯಾಸ್ ಅಖಿಲೇಶ್ ರೈ ಬಂಧಿತ ಆರೋಪಿ. ಈತನಿಂದ 2.17 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರನ್ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಜನ ಮೃತಪಟ್ಟ ಪ್ರಕರಣ ಸಂಬಂಧಿಸಿ ಈತನ ಬಂಧನ ನಡೆದಿದೆ.
ಅಕ್ರಮ ಮದ್ಯ ಸೇವಿಸಿ 70 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಶ್ರಖ್ ಮತ್ತು ಇಶುಪುರ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಎರಡೂ ಕಡೆಯೂ ದಾಖಲಾಗಿದ್ದ ಎಫ್ಐಆರ್ಗಳಲ್ಲಿ ಆರೋಪಿಯ ಹೆಸರಿರಲಿಲ್ಲ. ಆದರೆ ತನಿಖೆ ವೇಳೆ ಪ್ರಕರಣದಲ್ಲಿ ಈತನ ಭಾಗೀದಾರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಅಖಿಲೇಶ್ ಕುಮಾರ್ ಯಾದವ್ ವಿರುದ್ಧಅಬಕಾರಿ ಕಾಯ್ದೆಯಡಿ ಈ ಹಿಂದೆ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.