ಜಾರ್ಖಂಡ್, ಡಿ 18( DaijiworldNews/MS): ದೆಹಲಿಯಲ್ಲಿ ನಡೆದ ಶೃದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣದಂತೆ ಜಾರ್ಖಂಡ್ನಲ್ಲಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯ ಬರ್ಬರ ಹತ್ಯೆ ಮಾಡಿ ದೇಹವನ್ನು 50 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ದಾರ್ ಅನ್ಸಾರಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ನ ಸಾಹಿಬ್ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಬುಡಕಟ್ಟು ಜನಾಂಗದ 22 ವರ್ಷದರೂಬಿಕಾ ಪಹಡನ್ಎಂದು ಗುರುತಿಸಲಾಗಿದೆ. ನೆರೆಹೊರೆಯವರ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ಹಲವಾರು ವಾರಗಳಿಂದ ಜಗಳವಾಡುತ್ತಿದ್ದರು ಎನ್ನಲಾಗಿದೆ . ರೂಬಿಕಾ ಪಹಡನ್ ದೇಹವನ್ನು ಆರೋಪಿ ಪತಿ ವಿದ್ಯುತ್ ಕಟ್ಟರ್ ಬಳಸಿ ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ವರದಿಯಾಗಿದೆ
ಸಾಹಿಬ್ಗಂಜ್ನ ಬೋರಿಯೊ ಸಂತಾಲಿ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರದ ಹಿಂದೆ ಸಂತ್ರಸ್ತೆಯ ದೇಹದ ಭಾಗ ಪತ್ತೆಯಾದಾಗ ವಿಷಯ ಬೆಳಕಿಗೆ ಬಂದಿದೆ.
ಸಾಹಿಬ್ಗಂಜ್ ಉಪ ವಿಭಾಗದ ಪೊಲೀಸ್ ಅಧಿಕಾರಿ ರಾಜೇಂದ್ರ ಕುಮಾರ್ ದುಬೆ, "ಸಂತ್ರಸ್ತೆಯ ಕೆಲವು ದೇಹದ ಭಾಗಗಳು ಜಿಲ್ಲೆಯ ಪಾಳುಬಿದ್ದ ಮನೆಯಲ್ಲಿ ಪತ್ತೆಯಾಗಿವೆ. ಪ್ರಾಥಮಿಕ ತನಿಖೆ ನಂತರ, ಕೊಲೆಗೆ ಸಂಬಂಧಿಸಿದಂತೆ ಅನ್ಸಾರಿಯನ್ನು ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.